Bengaluru Urban

ʼರಾಮನಗರ, ಚನ್ನಪಟ್ಟಣ ಯುವ ಪೀಳಿಗೆಗೆ 25 ಸಾವಿರ ಉದ್ಯೋಗ ಸೃಷ್ಟಿʼ

ರಾಮನಗರ, ನವೆಂಬರ್‌ 11: ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಯುವಕರು ವಂಚಿತರಾಗಿದ್ದಾರೆ. ಕುಮಾರಣ್ಣನ ಪರವಾಗಿ ಯುವ ಸಮುದಾಯದ ಒಬ್ಬ ಯುವಕನಾಗಿ ನಿಮಗೆ ಮಾತು ಕೊಡುತ್ತಿದ್ದೇನೆ, ಯುವಕರ ದ್ವನಿಯಾಗಿ ನಾನು ಕೆಲಸ ಮಾಡುತೇನೆ, ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಯುವ ಪೀಳಿಗೆಗೆ ನಿಖಿಲ್ ಅವರು ಭರವಸೆ ನೀಡಿದರು.

ಚನ್ನಪಟ್ಟಣ ನಗರ ವ್ಯಾಪ್ತಿಯ ಹಲವಾರು ವಾರ್ಡ್ಗಳಿಗೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಅವರು ಮತ ಯಾಚನೆ ಮಾಡಿದ, ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ನಿಖಿಲ್ ಅವರು ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿ ಕೊಡಿಸುವ ಭರವಸೆ ನೀಡಿದರು.

ಇವತ್ತು ಕುಮಾರಸ್ವಾಮಿ ಅವರು ಕೆಂದ್ರದ ಬೃಹತ್ ಸಚಿವರಾಗಿದ್ದಾರೆ. ಅದಕ್ಕೆ ನೀವು ಕಾರಣ, ಈಗ ನಿಮ್ಮ ಋಣವನ್ನ ತೀರಿಸುವ ಕೆಲಸ ಮಾಡುತೀನಿ ಎಂದರು.ಕುಮಾರಣ್ಣ ರೈತರ ಪರವಾಗಿ ಮಾತು ಕೊಟ್ಟು, ಕೊಟ್ಟ ಮಾತಿನಂತೆ ರೈತರ ಸಾಲ ಮನ್ನ ಮಾಡಿದ್ದರೋ ಅದೇ ರೀತಿ ರಾಮನಗರ ಮತ್ತು ಚನ್ನಪಟ್ಟಣ ಜನತೆಗೆ ಉದ್ಯೋಗ ಕಲ್ಪಿಸಿಕೊಡಿಸುತ್ತೇನೆ ಎಂಬ ಸವಾಲು ಸ್ಪೀಕರ ಮಾಡಿದ್ದಾರೆ ಕುಮಾರಣ್ಣ ಅವರು ಎಂದರು.

ಕುಮಾರಣ್ಣ ಈಗಾಗಲೇ ದೆಹಲಿಯಲ್ಲಿ ನಾಲ್ಕುವರೆ ತಿಂಗಳಿಂದ ಸರಣಿ ಸಭೆ ಮಾಡುತ್ತಿದ್ದಾರೆ. ಅನೇಕ ಬೃಹತ್ ಕೈಗಾರಿಕಾ ಕಾರ್ಖಾನೆಯನ್ನ ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಮಾಡವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಇವತ್ತು ಎಲ್ಲಾ ತಾಯಂದಿರಿಗೂ ಹಾಗೂ ಯುವಕರಿಗೆ ಬೇಕಾಗಿರುವುದು ಸ್ವಾಭಿಮಾನದ ಬದುಕು, ಸ್ವಂತ ಕಾಲಿನ ಮೇಲೆ ನಿಂತು ದುಡಿಯುವಂತ ಉದ್ಯೋಗ ಬೇಕಾಗಿದೆ. ಇವೆಲ್ಲಾವನ್ನು ಕುಮಾರಣ್ಣ ಅವರ ಜತೆಯಲ್ಲಿ ನಿಂತು ಮಾಡಿಸಿಕೊಡುತ್ತೇನೆ. ನಿಮ್ಮನ್ನ ನಂಬಿ ಬಂದಿದ್ದೇನೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಾನು ಎರಡು ಬಾರಿ ಸೋಲು ಕಂಡರು , ನನ್ನಲ್ಲಿ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ ದೇವೇಗೌಡರ, ಕುಮಾರಸ್ವಾಮಿ ಅವರ ದೀರ್ಘ ಕಾಲದ ರಾಜಕಾರಣದಲ್ಲಿ ಬಡವರ ಪರವಾಗಿ ಇದ್ದವರು ಹಾಗೆಯೇ ನಾನುನು, ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿ ಇದೆ. ಚನ್ನಪಟ್ಟಣ ತಾಲೂಕಿನಲ್ಲಿ ಕುಮಾರಸ್ವಾಮಿ ಆರೂವರೆ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಅನೇಕ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button