ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆಮ್ಲಜನಕವನ್ನು ವಿತರಿಸುವ ಬಗ್ಗೆ ನೀತಿಯನ್ನು ರೂಪಿಸಲು ರಾಷ್ಟ್ರೀಯ ಕಾರ್ಯ ಪಡೆಯನ್ನು ರಚಿಸಿದೆ.
ಇಂದು ಕೋರ್ಟ್ ನಲ್ಲಿ ನಡೆದ ವಾದದ ಸಂದರ್ಭ ನ್ಯಾಯಮೂರ್ತಿ ಚಂದ್ರಚೂಡ್ ರವರು ಆಡಿದ ಮಾತುಗಳು ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ .
ನ್ಯಾಯಮೂರ್ತಿ ಚಂದ್ರಚೂಡ್: ಡಿಜಿಟಲ್ ವಿಭಜನೆಯ ಬಗ್ಗೆ ಏನು ಹೇಳುತ್ತೀರಾ? ಪ್ರತಿಯೊಬ್ಬರೂ COWIN ನಲ್ಲಿ ನೋಂದಾಯಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಜನರು ಈ ಅಪ್ಲಿಕೇಶನ್ನಲ್ಲಿ ನೋಂದಾಯಿಸಲು ಸಾಧ್ಯವೇ? ಅವರು ಅದನ್ನು ಮಾಡುತ್ತಾರೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ?
ನ್ಯಾಯಮೂರ್ತಿ ಚಂದ್ರಚೂಡ್: ಭಾರತದ ಲಸಿಕೆ ನೀತಿ ಏನು? ನೀವು ಒಂದು ರಾಷ್ಟ್ರೀಯ ಸಂಸ್ಥೆ ಎಂದು ಪರಿಗಣಿಸಿ, ಲಸಿಕೆಗಳನ್ನು ಸಂಗ್ರಹಿಸುತ್ತೀರಾ ಅಥವಾ ರಾಜ್ಯಗಳು ಲಸಿಕೆ ಸಂಗ್ರಹಿಸಲು ಸ್ವತಂತ್ರವೇ?
ನ್ಯಾಯಮೂರ್ತಿ ಚಂದ್ರಚೂಡ್: ಲಸಿಕೆಗಳು ಕೇಂದ್ರ ಸರ್ಕಾರಕ್ಕೆ ಒಂದು ಬೆಲೆಗೆ ಸಿಗುತ್ತವೆ, ರಾಜ್ಯಗಳಿಗೆ ಒಂದು ಬೆಲೆ, ಇದು ಏಕೆ?
ನಾನು ಸಂವಿಧಾನವನ್ನು ಓದುತ್ತಿದ್ದೆ. ಆರ್ಟಿಕಲ್ 1 ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಎಂದು ಹೇಳುತ್ತದೆ. ನಮ್ಮದು ಸಂಯುಕ್ತ ರಾಷ್ಟ್ರವಾಗಿರುವಾಗ ಭಾರತ ಸರ್ಕಾರ ಲಸಿಕೆಗಳನ್ನು ಸಂಗ್ರಹಿಸಿ ವಿತರಿಸಬೇಕು. ಈಗ ರಾಜ್ಯಗಳು ತತ್ತರಿಸುತ್ತಿವೆ.
ನ್ಯಾಯಮೂರ್ತಿ ಚಂದ್ರಚೂಡ್: ಕೇಂದ್ರವು ಕೇವಲ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಿದೆ ಅಂದರೆ 45 ವರ್ಷಕ್ಕಿಂತ ಕೆಳಗಿನವರನ್ನು ಹಾಗೆ ಬಿಡಬೇಕೆ? ತಾರ್ಕಿಕತೆ ಏನು? 18 ರಿಂದ 45 ರ ನಡುವಿನ 50% ರಷ್ಟು ಜನರಿಗೆ ಲಸಿಕೆ ಪಡೆಯಲು ಸಾಧ್ಯವಿಲ್ಲ. ಅವರೇನು ಮಾಡಬೇಕು. ಬಡಜನರಿಗೆ ಲಸಿಕೆ ಪಡೆಯಲು ಸಾಧ್ಯವೇ ಎಂಬುದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು.