ಮಂಗಳೂರು: ಪಾರ್ಕಿಂಗ್ ವೇಳೆ ಹೊತ್ತಿ ಉರಿದ ಕಾರು- ಅಪಾಯದಿಂದ ವೈದ್ಯೆ ಪಾರು

ಮಂಗಳೂರು: ಪಾರ್ಕಿಂಗ್ ವೇಳೆ ವೈದ್ಯರೊಬ್ಬರ ಕಾರು ಹೊತ್ತಿ ಉರಿದಿದ್ದು, ವೈದ್ಯೆ ಅಪಾಯದಿಂದ ಪಾರಾದ ಘಟನೆ ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ಬಳಿ ಸೋಮವಾರ ನಡೆದಿದೆ.

ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿಕೊಂಡು ಬಂದು ಅಪಾರ್ಟ್‌ಮೆಂಟ್ ಬಳಿ ತಂದು ನಿಲ್ಲಿಸಿದ್ದಾರೆ‌. ಈ ವೇಳೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರಿನಿಂದ ಇಳಿದಿದ್ದಾರೆ. ಅಷ್ಟರಲ್ಲಾಗಲೇ ಕಾರಿನ ಮುಂಭಾಗ ಸುಟ್ಟು ಉರಿದು ಹೋಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಬೆಂಕಿಗಾಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.

Latest Indian news

Popular Stories