ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಯಿಂದ ಮಮತಾ ಬ್ಯಾನರ್ಜಿಯ ಗುಣಗಾನ

ಪ.ಬ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿದರು. ಅವರು ಜಯಪ್ರಕಾಶ್ ನಾರಾಯಣ್ ಮತ್ತು ಮಾಜಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿವಿ ನರಸಿಂಹ ರಾವ್ ಅವರೊಂದಿಗೆ ಅವರನ್ನು ಹೋಲಿಸಿದ್ದಾರೆ.

ಬುಧವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಸ್ವಾಮಿ ಅವರು ಭಾರತೀಯ ರಾಜಕೀಯದಲ್ಲಿ ಅಪರೂಪದ ಗುಣವನ್ನು ಹೊಂದಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಸ್ವಾಮಿಯವರು, “ನಾನು ಭೇಟಿಯಾದ ಅಥವಾ ಕೆಲಸ ಮಾಡಿದ ಎಲ್ಲಾ ರಾಜಕಾರಣಿಗಳಲ್ಲಿ ಮಮತಾ ಬ್ಯಾನರ್ಜಿ, ಜೆಪಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿವಿ ನರಸಿಂಹ ರಾವ್ ಭಾರತದ ರಾಜಕೀಯದಲ್ಲಿ ಅಪರೂಪದ ಗುಣವಂತರು ಎಂದು ಶ್ಲಾಘಿಸಿದ್ದಾರೆ.

ಮಂಗಳವಾರ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರಾದ ಕೀರ್ತಿ ಆಜಾದ್, ಹರಿಯಾಣ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅಶೋಕ್ ತನ್ವರ್ ಮತ್ತು ಜೆಡಿಯು ಮಾಜಿ ರಾಜ್ಯಸಭಾ ಸಂಸದ ಪವನ್ ವರ್ಮಾ ಟಿಎಂಸಿಗೆ ಸೇರ್ಪಡೆಗೊಂಡರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನವೆಂಬರ್ 29 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ದಿನಗಳ ಮುಂಚಿತವಾಗಿ ಭೇಟಿ ನೀಡಿದ್ದಾರೆ.

Latest Indian news

Popular Stories