ಬೆಂಗಳೂರು: ಉಪ ಚುನಾವಣೆಯಲ್ಲಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆದ್ದಿದೆ. ಸಿಂಧಗಿಯಲ್ಲಿ ಸೋತಿದ್ದೇವೆ. ಸಿಂಧಗಿಯಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಸರಿಯಾಗಿಲ್ಲ ಆ ಕಾರಣಕ್ಕೆ ನಾವು ಅಲ್ಲಿ ಸೋತಿದ್ದೇವೆ.
ಆದರೆ ಚುನಾವಣೆಯಲ್ಲಿ ಇದೀಗ ಬಿಜೆಪಿಯ ವರ್ಚಸ್ಸು, ಮೋದಿ ವರ್ಚಸ್ಸು ಕಡಿಮೆಯಾಗಿರುವುದು ಕಷ್ಡಕರವಾಗಿದೆ. ಆದರೊಂದಿಗೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಇದು 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಸರಕಾರಕ್ಕೆ ಬರಲಿದೆ ಎಂದರು.
ಜೆ.ಡಿ.ಎಸ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದೆ. ಅದರ ಕುರಿತು ಮಾಜಿ ಪ್ರಧಾನಿ ದೇವೆಗೌಡರ ಬಳಿ ಕೇಳಿ ಎಂದು ಹೇಳಿದರು.