ವಿಎಚ್‌ಪಿ ನೇತೃತ್ವದಲ್ಲಿ ರಾಜ್ಯ ಪ್ರಾಯೋಜಿತ ಹಿಂಸಾಚಾರ: ತ್ರಿಪುರಾ ಹಿಂಸಾಚಾರದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ವಕೀಲ

ನವದೆಹಲಿ: ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ವಕೀಲರು ಸೋಮವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದರು. ತಂಡವು ನೊಂದ ಕಕ್ಷಿದಾರರನ್ನು ಭೇಟಿ ಮಾಡಿ ವರದಿ ಪಡೆಯಿತು.

ಭಾರತೀಯ ಜನತಾ ಪಕ್ಷದ ರಾಜಕೀಯ ಹಿತಾಸಕ್ತಿಯನ್ನು ಹೆಚ್ಚಿಸಲು ಈ ಘಟನೆ ನಡೆದಿದೆ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಎಹ್ತೇಷಾಮ್ ಹಶ್ಮಿ ಮತ್ತು ಅಮಿತ್ ಶ್ರೀವಾಸ್ತವ ನೇತೃತ್ವದ ತಂಡ ಆರೋಪಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯ ಘಟನೆಗಳಿಗೆ ಸಂಬಂಧಿಸಿದಂತೆ ರಾಜ್ಯದ 51 ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರತಿಭಟನೆಯಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಆಸ್ತಿಗಳನ್ನು ಸುಟ್ಟುಹಾಕಲಾಗಿದೆ. ಮತ್ತು ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಭಾರಿ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ ಎಂದು ಪತ್ರಕರ್ತ ಸಮೃದ್ಧಿ ಕೆ ಸಕುನಿಯಾ ವರದಿ ಮಾಡಿದ್ದಾರೆ.

ಸ್ಟೇಷನರಿ ಅಂಗಡಿ ಮಾಲೀಕ ನಿಜಾಮುದ್ದೀನ್, “ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಬಜರಂಗದಳ 3 ದಿನಗಳ ಹಿಂದೆ ರ಼್ಯಾಲಿ ನಡೆಸುವುದಾಗಿ ಘೋಷಿಸಿದ್ದವು. ಅವರು ಮಸೀದಿಯನ್ನು ಧ್ವಂಸಗೊಳಿಸಿದರು. ನನ್ನ ಅಂಗಡಿಯನ್ನೂ ಸುಟ್ಟುಹಾಕಿದರು. ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ವಕೀಲರು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ತಂಡವು ದಾಳಿಗೊಳಗಾದ ಪ್ರದೇಶಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಸಂತ್ರಸ್ತರು ಮತ್ತು ಪ್ರತ್ಯಕ್ಷದರ್ಶಿಗಳೊಂದಿಗೆ ಮಾತನಾಡಿದೆ ಎಂದು ಸಕುನಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದು “ವಿಎಚ್‌ಪಿ ನೇತೃತ್ವದ ರಾಜ್ಯ ಪ್ರಾಯೋಜಿತ ಹಿಂಸಾಚಾರ” ಎಂದು ಉನ್ನತ ನ್ಯಾಯಾಲಯದ ವಕೀಲರೊಬ್ಬರು ಹೇಳಿದ್ದಾರೆ.

“ಜೋ ಹಿಂದೂ ನಹೀ ಆಯಾ, ವೋ ಹಿಂದೂ ನಹೀ ಹೈ” ಪ್ರದೇಶದಲ್ಲಿ ವಿಎಚ್‌ಪಿ ಪುರುಷರು ಹಿಂದೂಗಳಿಗೆ ಮುಕ್ತ ಕರೆ ನೀಡುತ್ತಿದ್ದಾರೆ ಎಂದು ಸ್ಥಳೀಯರಾದ ರಂಜೀತ್ ತ್ರಿಪುರ ಆರೋಪಿಸಿದ್ದಾರೆ.

“ಅವರು ಮನೆಗಳು, ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚಿದರು ಮತ್ತು ಅದನ್ನು ಧ್ವಂಸಗೊಳಿಸಿದರು” ಎಂದು ಅವರು ಹೇಳಿದರು.

ಗುಂಪು (ವಿಎಚ್‌ಪಿ ಮತ್ತು ಬಜರಂಗದಳದ ಜನರು) ಮುಸ್ಲಿಂ ಕುಟುಂಬದ ಮನೆಯೊಳಗೆ ಪ್ರವೇಶಿಸಿ ಮಹಿಳೆ ಮತ್ತು ಆಕೆಯ ಮಗಳ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ ಎಂದು ಸಕುನಿಯಾ ಟ್ವೀಟ್ ಮಾಡಿದ್ದಾರೆ.

ಸಕುನಿಯಾ ಅವರೊಂದಿಗೆ ಮಾತನಾಡಿರುವ ತಂಡವು ಶೀಘ್ರದಲ್ಲೇ ದೆಹಲಿಯಲ್ಲಿ ತನ್ನ ವಿವರವಾದ ವರದಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ನಂತರ ಅದನ್ನು ರಾಷ್ಟ್ರಪತಿ, ಸಿಜೆಐ, ಕೇಂದ್ರ ಗೃಹ ಕಾರ್ಯದರ್ಶಿ, ಎನ್‌ಎಚ್‌ಆರ್‌ಸಿ ಅವರಿಗೆ ಕಳುಹಿಸಲಾಗುವುದು.

ತಾನು ಮತ್ತು ತನ್ನ ತಂಡವು ಚಮ್ತಿಲಾ ಮಸೀದಿಗೆ ಭೇಟಿ ನೀಡಿದಾಗ ಅದನ್ನು ಧ್ವಂಸಗೊಳಿಸಿರುವುದು ಕಂಡುಬಂದಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಹಶ್ಮಿ ಹೇಳಿದ್ದಾರೆ. ಅದನ್ನು ಧ್ವಂಸಗೊಳಿಸಿಲ್ಲ/ನಾಶಗೊಳಿಸಲಾಗಿಲ್ಲ ಎಂಬ ಸತ್ಯವನ್ನು ಪೊಲೀಸರು ಹೇಗೆ ನಿರಾಕರಿಸುತ್ತಿದ್ದಾರೆ ಎಂದು ಅವರು ಆಘಾತಕ್ಕೊಳಗಾಗಿದ್ದಾರೆ ಎಂದು ಪತ್ರಕರ್ತೆ ಸಕುನಿಯಾ ವರದಿ ಮಾಡಿದ್ದಾರೆ. ತಂಡವು ಚಿತ್ರೀಕರಿಸಿದ ಧ್ವಂಸಗೊಳಿಸಿದ ಮಸೀದಿಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

Latest Indian news

Popular Stories