ಜನರೊಂದಿಗಿನ ಕಾಂಗ್ರೆಸ್ ಸಂಪರ್ಕ ಕಡಿದಿದೆ, ಅದನ್ನು ಮರುಸ್ಥಾಪಿಸುವ ಅಗತ್ಯವಿದೆ: ರಾಹುಲ್ ಗಾಂಧಿ

By : Vishwanath SPTI
ನವದೆಹಲಿ: ಜನರೊಂದಿಗೆ ಕಾಂಗ್ರೆಸ್ ಸಂಪರ್ಕ ಕಡಿದಿರುವುದಾಗಿ ಒಪ್ಪಿಕೊಂಡಿರುವ ರಾಹುಲ್ ಗಾಂಧಿ ಅವರು ಪಕ್ಷವನ್ನು ಮರುಸ್ಥಾಪಿಸಲು ಮತ್ತು ಬಲಪಡಿಸಲು ಅಕ್ಟೋಬರ್‌ನಲ್ಲಿ ಯಾತ್ರೆಯನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಒಂದು ಕುಟುಂಬದ ಬಹು ಸದಸ್ಯರು ಪಕ್ಷಕ್ಕಾಗಿ ದುಡಿಯದೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನೋಡಿಕೊಳ್ಳಲು ‘ಒಂದು ಕುಟುಂಬ, ಒಂದು ಟಿಕೆಟ್’ ನಿಯಮಕ್ಕೆ ಒತ್ತು ನೀಡಿದರು. ಮುಂದಿನ ಸುತ್ತಿನ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗೆ ಕದನ-ಸಿದ್ಧವಾಗುವಂತೆ ಮಾಡಲು ಪಕ್ಷದ ಸಂಘಟನೆಯಲ್ಲಿ ವ್ಯಾಪಕವಾದ ಸುಧಾರಣೆಗಳಿಗಾಗಿ ಕಾಂಗ್ರೆಸ್ ‘ನವ್ ಸಂಕಲ್ಪ್’ ಅನ್ನು ಅಳವಡಿಸಿಕೊಂಡಿದೆ.

ಚುನಾವಣೆಗೆ ಸ್ಪರ್ಧಿಸಲು ಬಯಸುವ ಕುಟುಂಬದ ಮತ್ತೊಬ್ಬರು ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಆದರ್ಶಪ್ರಾಯವಾಗಿ ಕೆಲಸ ಮಾಡಿರಬೇಕು ಹೀಗೆ ಪಕ್ಷವು ‘ಒಂದು ಕುಟುಂಬ, ಒಂದು ಟಿಕೆಟ್’ ಸೂತ್ರವನ್ನು ಅಳವಡಿಸಿಕೊಂಡಿದೆ.

ಪಕ್ಷದ ಮೂರು ದಿನಗಳ ‘ನವ ಸಂಕಲ್ಪ ಚಿಂತನ ಶಿಬಿರ’ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಜನರೊಂದಿಗಿನ ಕಾಂಗ್ರೆಸ್ ನ ಸಂಪರ್ಕ ಮುರಿದು ಬಿದ್ದಿರುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ನಮ್ಮ ಹೋರಾಟ ಸಿದ್ಧಾಂತಕ್ಕಾಗಿ, ನಾವು ಜನರ ಬಳಿಗೆ ಹೋಗಿ ಅವರೊಂದಿಗೆ ಕುಳಿತುಕೊಳ್ಳಬೇಕು, ಪಕ್ಷವು ಜನರೊಂದಿಗೆ ಹೊಂದಿದ್ದ ಸಂಪರ್ಕವನ್ನು ಮರುಸ್ಥಾಪಿಸಬೇಕು ಎಂದು ಅವರು ಹೇಳಿದರು.

ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪಕ್ಷವು ಜನರ ಬಳಿಗೆ ಹೋಗಲು ಯಾತ್ರೆಯನ್ನು ಕೈಗೊಳ್ಳುತ್ತದೆ. ಇದರೊಂದಿಗೆ ಜನರೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ ಎಂದು ನಾವು ನಂಬಿದ್ದೇವೆ. ಇದನ್ನು ಶಾರ್ಟ್‌ಕಟ್‌ಗಳಿಂದ ಮಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

Latest Indian news

Popular Stories