ಗುಜರಾತಿನಲ್ಲಿ ಟೊಪ್ಪಿ, ಪೈಜಾಮ ಧರಿಸಿದ್ದಕ್ಕೆ ಇಬ್ಬರು ಮದರಸ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

ಗುಜರಾತ್: ಪಾಲ್ದಿ ಪ್ರದೇಶದ ಇಬ್ಬರು ಮದ್ರಸದ ವಿದ್ಯಾರ್ಥಿಗಳ ಮೇಲೆ ಹಿಂದು ಪರ ಸಂಘಟನೆಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳು ಉಮರ್ (17) ಮತ್ತು ಕಿಝಾರ್ (16) ಆಗಿದ್ದು ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲಿನಿಂದ ತುಳಿದು, ಗುಂಪು ಸೇರಿ ಮನ ಬಂದಂತೆ ಥಳಿಸಿ ಕೃತ್ಯ ಎಸಗಿದೆ. ಕುರ್ತಾ, ಪೈಜಮಾ ಧರಿಸಿದ ಕಾರಣಕ್ಕೆ ಹಿಂದುತ್ವ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.

ಉಮರ್ ಕೈಯನ್ನು ತಿರುಚಿ ಆತನ ತಲೆಯ ಮೇಲೆ ಪದೇ ಪದೇ ಹಲ್ಲೆ ಮಾಡಲಾಗಿದೆ.ಆತನಿಗೆ ತೀವ್ರ ಗಾಯಗಳಾಗಿದ್ದು, ಖಿಜಾರ್ ಎರಡೂ ಕೈಗಳಿಗೆ ಹೊಲಿಗೆ ಹಾಕಲಾಗಿದೆ. ಮಕ್ಕಳಿಬ್ಬರೂ ತಮ್ಮ ಸ್ಕೂಟರ್‌ನಲ್ಲಿ ಪಾಲ್ಡಿಯ ಮನೆಗೆ ಮರಳುತ್ತಿದ್ದರು ಎಂದು ವರದಿಯಾಗಿದೆ.

ಮುಸ್ಲಿಮರ ವಿರುದ್ಧ ದ್ವೇಷದ ಅಪರಾಧಗಳು ಇತ್ತೀಚೆಗೆ ದೇಶಾದ್ಯಂತ ಹೆಚ್ಚಾಗುತ್ತಿವೆ, ವಿಶೇಷವಾಗಿ ಹಿಂದಿ ವಲಯದಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿದೆ.

Latest Indian news

Popular Stories