ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನೀಡಲು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಒತ್ತಾಯ

ಗಣರಾಜ್ಯೋತ್ಸವದ ಪೆರೇಡ್ ಗಾಗಿ ಕೇರಳ ಸರಕಾರ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರದ ಗಣರಾಜ್ಯೋತ್ಸವ ಸಮಿತಿಯು ತಿರಸ್ಕರಿಸಿರುವುದನ್ನು CPIM ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಶತಮಾನಗಳ ಹಿಂದೆಯೇ ಅಸ್ಪ್ರಶ್ಯತೆ ಮತ್ತಿತರ ಅನ್ಯಾಯಗಳ ವಿರುದ್ದ ಹಿಂದೂ ಧರ್ಮದ ಸುಧಾರಣೆಗಾಗಿ ತೊಡಗಿಸಿಕೊಂಡಿದ್ದ ನಾರಾಯಣ ಗುರುಗಳನ್ನು ಅಪಮಾನಿಸುವ ಕೇಂದ್ರದ ನಡೆ ಖಂಡನೀಯ.

ಇದು ಆಡಳಿತದಲ್ಲಿ ಆರ್ ಎಸ್ ಎಸ್ ಚಿಂತನೆಗಳು ಮೇಲುಗೈ ಸಾಧಿಸಿರುವುದರ ಪರಿಣಾಮ. ಕೇಂದ್ರ ಸರಕಾರವು ತಕ್ಷಣ ಆಗಿರುವ
ಪ್ರಮಾದವನ್ನು ಸರಿಪಡಿಸಿ ಕೇರಳ ಸರಕಾರ ಯೋಜಿಸಿದ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಸಿ.ಪಿ.ಐ(ಎಮ್) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Latest Indian news

Popular Stories