ಚೆನ್ನೈ: ಪೋಪ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವುದು ಪ್ರಶಂಸೆಗಾಗಿಯೋ? ಅಥವಾ ಕೀಳರಿಮೆಯಿಂದಲೋ? ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನವೆಂಬರ್ನಲ್ಲಿ ವ್ಯಾಟಿಕನ್ ಸಿಟಿಯ ಕ್ಯಾಥೋಲಿಕ್ ಪೋಪ್ ಮತ್ತು ನರೇಂದ್ರ ಮೋದಿ ನಡುವಿನ ಭೇಟಿ
ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಮನವಿ ಮಾಡಿದ್ದಾರೆ ಎಂದು ವ್ಯಾಟಿಕನ್ನಲ್ಲಿರುವ ನನ್ನ ಆಪ್ತರು ಸಂದೇಶ ಕಳುಹಿಸಿದ್ದಾರೆ ಎಂದಿದ್ದಾರೆ.
ಹಿಂದುತ್ವವಾದಿ ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿಗಳು ಕ್ಯಾಥೋಲಿಕ್ ಪೋಪ್ ಅವರನ್ನು ಆಹ್ವಾನಿಸಿ ಪ್ರಶಂಸೆಗಾಗಿ ಯಾಕೆ ಒದ್ದಾಡುತ್ತಾರೆ? ಅಥವಾ ಕೀಳರಿಮೆಯೇ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.