#ModiFailedIndianFarmers ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ – ಸರಕಾರದ ವಿರುದ್ಧ ಮುಂದುವರಿದ ಆಕ್ರೋಶ

ನವದೆಹಲಿ: ರೈತರ ಪ್ರತಿಭಟನೆಯ ಆರಂಭದಿಂದಲೇ ಮೋದಿ ಸರ್ಕಾರ ರೈತರ ಒಗ್ಗಟ್ಟನ್ನು ಮುರಿಯಲು ಮತ್ತು ಪ್ರತಿಭಟನೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಟ್ವೀಟರ್ ನಲ್ಲಿ #ModiFailedIndianFarmers ಹ್ಯಾಶ್ ಟ್ರೇಂಡ್ ಆಗುತ್ತಿದ್ದು ನೆಟ್ಟಿಗರು ಕೇಂದ್ರ ಸರಕಾರ ರೈತರೊಂದಿಗೆ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ರೈತ ಸಂಘ, ರೈತರು ತಮ್ಮ ಹಕ್ಕುಗಳ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಮೋದಿಯು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಚುನಾವಣೆಯಲ್ಲಿ ಸೋಲಿಸಲಾಗುವುದೆಂಬ ಆಕ್ರೋಶ ಭರಿತ ಮಾತುಗಳು ಟ್ವೀಟ್ ನಲ್ಲಿ ಟ್ರೆಂಡ್ ಆಗುತ್ತಿದ್ದು ಕೆಲವೊಂದು ಟ್ವೀಟ್ ಇಲ್ಲಿದೆ.

ರೈತರು ಹತ್ತಾರು ವರ್ಷಗಳಿಂದ ಕೇಂದ್ರ ಸರಕಾರ ತರಲು ಹೊರಟಿರುವ ಮೂರು ಕೃಷಿ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಈಗಾಗಲೇ ನೂರಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

Latest Indian news

Popular Stories