‘ಚೀನಾ ಭಾರತದ ಭೂಮಿಯನ್ನು ಕಿತ್ತುಕೊಂಡಿದೆ’ ಎಂದ ರಾಹುಲ್ ಗಾಂಧಿ 

ಹೊಸದಿಲ್ಲಿ: ಲಡಾಖ್‌ನಲ್ಲಿರುವ ಭಾರತದ ಭೂಪ್ರದೇಶವನ್ನು ಚೀನಾ “ಆಕ್ರಮಣ” ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚೀನಾದಲ್ಲಿ ಚೀನಾದ ಆಕ್ರಮಣವನ್ನು “ಗಂಭೀರ ಸಮಸ್ಯೆ” ಎಂದು ರಾಹುಲ್ ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಂಧಿ, “ನಾನು ಹಲವು ವರ್ಷಗಳಿಂದ ಇದನ್ನು ಹೇಳುತ್ತಿದ್ದೇನೆ … ಪ್ರಧಾನ ಮಂತ್ರಿ ಏನು ಹೇಳಿದ್ದಾರೆ, ನಾನು ಲಡಾಖ್‌ನಿಂದ ಹಿಂತಿರುಗಿದ್ದೇನೆ … ಪ್ರಧಾನ ಮಂತ್ರಿ ಏನು ಹೇಳಿದ್ದಾರೆ … ಅದು ಒಂದು ಇಂಚು ಭೂಮಿ ಅಕ್ರಮಿಸಿರುವುದಲ್ಲ ಸಂಪೂರ್ಣ ಸುಳ್ಳು” ಎಂದು ಹೇಳಿದರು.

ಲಡಾಖ್‌ನ ಎಲ್ಲಾ ಜನರಿಗೆ ಚೀನಾ ಭಾರತದ ಭೂಮಿಯ ಮೇಲೆ “ಒಳನುಗ್ಗಿದೆ” ಎಂದು ತಿಳಿದಿದೆ ಎಂದು ಹೇಳಿದರು.

ಚೀನಾ ತನ್ನ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚೀನಾವನ್ನು ಸೇರಿಸಿರುವ ಕುರಿತು ಎಎನ್‌ಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಕ್ಷೆಯ ಪ್ರಶ್ನೆ ತುಂಬಾ ಗಂಭೀರವಾಗಿದೆ. ಆದರೆ ಅವರು (ಚೀನಾ) ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಕೂಡ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

Latest Indian news

Popular Stories