ದರೋಡೆ ಯತ್ನ | ಶಿಕ್ಷಕ ಮೃತ್ಯು, ಕುಟುಂಬದ ಏಳು ಮಂದಿಗೆ ಗಾಯ

ಉ.ಪ್ರ:ದರೋಡೆ ನಡೆಸಲು ಯತ್ನಿಸಿದ ವೇಳೆ ದುಷ್ಕರ್ಮಿಗಳು ಖಾಸಗಿ ಕಾಲೇಜಿನ ಶಿಕ್ಷಕಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ.

ಶಹಜಹಾನ್‌ಪುರದಲ್ಲಿರುವ ಶಿಕ್ಷಕರ ಮನೆಯಲ್ಲಿ ದರೋಡೆ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳ ದಾಳಿಗೆ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ರಾತ್ರಿ ದರೋಡೆಕೋರರ ಗುಂಪೊಂದು ಶಹಜಹಾನ್‌ಪುರದ ಕತ್ರಾ ಪ್ರದೇಶದಲ್ಲಿ ಅಲೋಕ್ ಕುಮಾರ್ ಗುಪ್ತಾ (36) ಅವರ ಮನೆಗೆ ನುಗ್ಗಿದ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.

ಶಬ್ಧ ಕೇಳಿ ಅಲೋಕ್ ಎಚ್ಚರಗೊಂಡಾಗ, ಆರೋಪಿಗಳು ಅವರ ಮೇಲೆ ಹರಿತವಾದ ಆಯುಧಗಳಿಂದ ಹಲವಾರು ಬಾರಿ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೀನಾ ಹೇಳಿದ್ದಾರೆ.

ಅಲೋಕ್ ಅವರ ಪತ್ನಿ ಖುಷ್ಬು, ಅವರ ತಂದೆ ಸುಧೀರ್ ಗುಪ್ತಾ, ಸಹೋದರ ಪ್ರಶಾಂತ್, ರುಚಿ (ಪ್ರಶಾಂತ್ ಅವರ ಪತ್ನಿ) ಮತ್ತು ಮೂವರು ಮಕ್ಕಳು ಆರೋಪಿಗಳಿಂದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬರೇಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. 

Latest Indian news

Popular Stories