ಅಂಬೇಡ್ಕರ ಅಭಿವೃದ್ಧಿ ನಿಗಮದ ಮಹೀಂದ್ರ ವಾಹನ ಹರಾಜು

ಬೀದರ ಜೂನ್ 18 (ಕರ್ನಾಟಕ ವಾರ್ತೆ):- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ಕಛೇರಿಯ ಮಹೀಂದ್ರ 2008 ಮಾಡಲ್ ವಾಹನ ಸಂಖ್ಯೆ ಕೆ.ಏ 04 ಎಮ್.ಇ.7829 ಪ್ರಾದೆಶಿಕ ಸಾರಿಗೆ ಕಛೇರಿಯಿಂದ ನಿಷ್ಕೃಯೇ ಗೊಳಿಸಿರುವುದರಿಂದ ಮಾರಾಟ ಮಾಡಲು ನೇರವಾಗಿ ಹರಾಜಿಗಾಗಿ ಇಡಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಯುಕ್ತ ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಜೂನ.23 ರಂದು ಸಂಜೆ 3 ಗಂಟೆ ಒಳಗಾಗಿ ಜಿಲ್ಲಾ ವ್ಯವಸ್ಥಾಪಕರು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಬೀದರ ಅವರ ಹೆಸರಿನಲ್ಲಿ 5000 ರೂ. ಗಳ ಡಿ.ಡಿ. ಮಾಡಿ ನಿಗಮದ ಜಿಲ್ಲಾ ಕಛೇರಿಗೆ ಸಲ್ಲಿಸಿ, ನಂತರ ಜೂನ. 25 ರಂದು ಸಮಯ ಮಧ್ಯಾಹ್ನ 3 ಗಂಟೆಗೆ ಹರಾಜಿನಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿರುತ್ತಾರೆ.

Latest Indian news

Popular Stories