ಹತ್ತಿ ಗುಲಾಬಿ ಕಾಯಿಕೊರಕ ನಿರ್ವಹಣಾ ತರಬೇತಿ

ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, ಕೃಷಿ ಮಹಾವಿದ್ಯಾಲಯ ರಾಯಚೂರು, ಕೃಷಿ ಇಲಾಖೆ, ಎಟಿಜಿಸಿ ಹೈದ್ರಾಬಾದ ಸಂಸ್ಥೆ ಸಂಯುಕ್ತ ಆಶ್ರಯದೊಂದಿಗೆ ಹತ್ತಿ ಗುಲಾಬಿ ಕಾಯಿಕೊರಕ ನಿರ್ವಹಣಾ ತರಬೇತಿಯನ್ನು ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ನಡೆಯಿತು. ಕೃಷಿ ಮಹಾವಿದ್ಯಾಲಯದ ಡೀನ್ ರಾದ ಡಾ. ಸುರೇಶ ಎಸ್ ಪಾಟೀಲ್ ರವರು ಮಾತನಾಡಿ ರೈತರು ರಾಸಾಯನಿಕ ಮುಕ್ತ ಕೃಷಿ ತಂತ್ರಜ್ಞಾನ ಅಳವಡಿಸಿ ಸ್ವಾಲಂಬಿ ಬದುಕು ರೂಪಸಿಲು ಸಲಹೆ ನೀಡಿದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಂ.ಎಂ. ಧನೋಜಿ ರವರು ಮಾತನಾಡಿ ರೈತರಿಗೆ ಹತ್ತಿಯಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಹಾಗೂ ವಿಜ್ಞಾನಿಗೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಳಿಸಿದರು. ಕಲಬುರಗಿ ಕೃಷಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಅನುಸೂಯ ಹೂಗಾರ್‍ರವರು ಪರಿಸರ ಸ್ನೇಹಿ ಕೀಡೆ ನಿರ್ವಹಣೆಗೆ ರೈತರು ಹೆಚ್ಚು ಒತ್ತು ನೀಡಬೇಕು ಜೊತೆಗೆ ಮಳೆಯಿಂದಾಗಿ ಆಧ ಬೆಳೆ ಹಾನಿ ಸಮೀಕ್ಷ ಮೊಬೈಲ್ ಆ್ಯಪ್ ಬಳಸಿ ತಮ್ಮ ಹೊಲದ ಚಿತ್ರವನ್ನು ಅಪ್‍ಲೋಡ್ ಮಾಡಲು ಸಲಹೆ ನೀಡಿದರು.
ಎಟಿಜಿಸಿ ಜೈವಿಕ ತಂತ್ರಜ್ಞಾನ ಕಂಪನಿಯ ಪ್ರತಿನಿಧಿಗಳಾದ ಡಾ. ಚಿತ್ತರಂಜನ್, ಡಾ. ಶಶಿಧರನ್, ಡಾ. ಮಹಾಂತೇಶ್ ಹತ್ತಿ ಗುಲಾಬಿ ಕಾಯಿಕೊರಕದಕ ನಿರ್ವಹಣಾ ಮಾಹತಿ ನೀಡಿದರು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕೀಟ ವಿಜ್ಞಾನಿಗಳಾದ ಡಾ. ಎ.ಜಿ. ಶ್ರೀನಿವಾಸ್ ರವರು ರೈತರಿಗೆ ಹತ್ತಿ ಕೀಡೆಗಳ ನಿರ್ವಹಣಾ ಮಾಹಿತಿ ನೀಡಿದರು. ಸ್ಲಾಟ್ ತಾಂತ್ರಿಕತೆ, ಫೆರೋಮೋನ್ ಬಳಸಿ ಕೀಡೆ ನಿಯಂತ್ರಣಾ ಮಾಹಿತಿಯನ್ನು ರೈತರಿಗೆ ವಿವರಿಸಿದರು. ಕೆವಿಕೆಯ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಹಾಯಕ ಶ್ರೀ ನಿರಂಜನ್ ಧನ್ನಿ ವಂದಿಸಿದರು. ಹಿರಿಯ ಕೃಷಿ ಅನುಭವಿ ರೈತರಾದ ಶ್ರೀ ಸೋಮಣ್ಣ ನಡುಗೆಟ್ಟಿ ಪ್ರಸ್ತುತ ಹತ್ತಿ ಬೆಳೆಯ ಸ್ಥಿತಿಗತಿ ವಿವರಿಸಿದರು. ಗೌಡಗಾಂವ್, ಸುಂಟನೂರ್, ಹಸರ್‍ಗುಂಡಗಿ ಗ್ರಾಮದ ರೈತರು ಭಾಗವಹಿಸಿದರು. ಹತ್ತಿಯಲ್ಲಿ ನೂತನ ಸಂಯೋಗ ಅಡಚಣ ತಂತ್ರಜ್ಞಾನದಿಂದ ಗುಲಾಬಿ ಕಾಯಿಕೊರಕ ನಿರ್ವಹಣೆ ಮಾಡಬಹುದಾಗಿದೆ.

Latest Indian news

Popular Stories