ಸಾರ್ಥಕ ರೇಡಿಯೋ ಪಯಣಕ್ಕೆ ನಾಂದಿ ಹಾಡಿದ ಶಾರದಾ

ಮಡಿಕೇರಿ ಆಕಾಶವಾಣಿಯಲ್ಲಿ ನೊಂದ ಮನಸ್ಸುಗಳಿಗೆ ತಮ್ಮ ಸುಂದರ ಸ್ವರದ ಮೂಲಕ ಸಾಂತ್ವಾನ ಹೇಳಿದ ಸಂವಹನ ಮಾದ್ಯಮದ ದೊಡ್ಡ ಶಕ್ತಿಯಾಗಿದ್ದಾರೆ ಎಂದ ಕೊಡಗು ಕನ್ನಡ ಸಾಹಿತ್ಯ ಪರಿಷತ್ತು
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತಿಚೆಗೆ ಮಡಿಕೇರಿ ಆಕಾಶವಾಣಿಯಿಂದ ನಿವೃತ್ತಿ ಹೊಂದಿದ ಕೂಪದಿರ ಶಾರದಾ ನಂಜಪ್ಪ ರವರನ್ನು ಅವರು ಆಕಾಶವಾಣಿಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕರುಗಳಾದ ವಿ.ಟಿ ಮಂಜುನಾಥ್, ಶೋಭಾ ಸುಬ್ಬಯ್ಯ, ಶ್ವೇತಾ ರವೀಂದ್ರ, ಸದಸ್ಯರುಗಳಾದ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸುಂದರಿ ಮಾಚಯ್ಯ, ಕಸ್ತೂರಿ ಗೋವಿಂದಮಯ್ಯ ಉಪಸ್ಥಿತರಿಧ್ದರು.

ಮಡಿಕೇರಿ ಎಫ್ಎಂ ರೇಡಿಯೋ ಸ್ಟೇಷನ್ ನಲ್ಲಿ
ಕೂಪದಿರ ಶಾರದಾ ನಂಜಪ್ಪ ಕಳೆದ 30 ವಷ೯ಗಳಲ್ಲಿ ರೇಡಿಯೋ ಮೂಲಕ ಸಂಮೋಹನದ ರೀತಿಯಲ್ಲಿ ಕೊಡಗಿನ ಮನೆ ಮನಗಳನ್ನೂ ತಲುಪಿದ್ದಾರೆ. ಸಂಹವನ ಮಾಧ್ಯಮದ ದೊಡ್ಡ ಶಕ್ತಿಯಾಗಿ ಶಾರದಾ ತಮಗೆ ಅರಿವಿಲ್ಲದಂತೆಯೇ ಬೆಳೆದಿದ್ದಾರೆ. ನೊಂದ ಮನಸ್ಸುಗಳಿಗೆ ತಮ್ಮ ಮಧುರ ಸ್ವರದ ಮೂಲಕವೇ ಸಾಂತ್ವನ ಹೇಳಿದ್ದಾರೆ. ವಿಶಿಷ್ಟ ಶೈಲಿಯ ಮಾತುಗಳ ಮೂಲಕ ಎಂಥವರಲ್ಲಿಯೂ ಸಂಭ್ರಮ ಉಂಟಾಗುವಂತೆ ಮಾಡಿದ್ದಾರೆ


30 ವಷ೯ಗಳ ಸಾಥ೯ಕ ರೇಡಿಯೋ ಪಯಣವನ್ನು ಮುಕ್ತಾಯಗೊಳಿಸಿ ಶಾರದಾ ವೖತ್ತಿಯಿಂದ ನಿವೖತ್ತಿಯಾಗಿದ್ದಾರೆ. ರೇಡಿಯೋದಲ್ಲಿನ ಮಾತುಕತೆಗೆ ವಿರಾಮ ಹೇಳುತ್ತಿದ್ದಾರೆ. ಉದ್ಘೋಷಕಿಯಾಗಿ ನಿರಂತರ ವೖತ್ತಿ ಜೀವನಕ್ಕೆ ಶಾರದಾ ವಿದಾಯ ಹೇಳುತ್ತಿದ್ದಾರೆ. ಕೊಡಗಿನ ರೇಡಿಯೋ ಮಾಧ್ಯಮದಲ್ಲಿ ಶಾರದಾ ಅತ್ಯಂತ ಯಶಸ್ವಿ ಉದ್ಘೋಷಕಿ ಎಂಬ ದಾಖಲೆಯ ಛಾಪನ್ನು ಮೂಡಿಸಿ ಬಾನುಲಿ ಕೇಂದ್ರದಿಂದ ನಿಗ೯ಮಿಸಿದ್ದಾರೆ. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಮತ್ತು ಮುಂದೆ ಸಮಾಜ ಸೇವೆಯಲ್ಲಿ ಅವರು ತೊಡಗಿಸಿಕೊಳ್ಳಲಿ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶಿಸುತ್ತದೆ.

Latest Indian news

Popular Stories