ಉಡುಪಿ: ಒಂದು ಮರ ಕಡಿದರೆ ಐದು ಗಿಡ ನೆಡುವ ಶಪಥ ಮಾಡೋಣ – ನ್ಯಾಯಾಧೀಶ ದಿನೇಶ್ ಹೆಗ್ಡೆ

ಉಡುಪಿ: ಹಸಿರೇ ನಮ್ಮ ಉಸಿರು ಎಂಬುದು ಕಾನೂನು ಸೇವೆಗಳ ಪ್ರಾಧಿಕಾರದ ಘೋಷವಾಕ್ಯ.ಹಸಿರು ಇಲ್ಲದಿದ್ದರೆ ಬದುಕೇ ಇಲ್ಲ.ಒಳ್ಳೆಯ ಮಳೆ ಬೆಳೆಯಾಗಲು ಗಿಡ ನೆಡಬೇಕು.ಮರ ಕಡಿಯುವುದನ್ನು‌ ನಾವು ನೋಡುತ್ತೇವೆ.ಆದರೆ ಗಿಡವನ್ನು ಯಾಕೆ ನೆಡಬೇಕು ಎಂಬ ಭಾವನೆ ನಮ್ಮದು. ಒಂದು ಮರ ಕಡಿದರೆ ಐದು ಗಿಡ ನೆಡುವ ಶಪಥ ಮಾಡೋಣ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಹೇಳಿದರು.

ಅವರು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಬಳಿಕ ಮಾತನಾಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ) ಉಡುಪಿ ಮತ್ತು ಅರಣ್ಯ ಇಲಾಖೆ,
ಉಡುಪಿ ವಲಯ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಕುಂತಲ ಎಸ್‌. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,ಶರ್ಮಿಳಾ ಎಸ್‌. ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸೋಮನಾಥ, 2 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ,ನಾಗರಾಜ ಬಿ. ಅಧ್ಯಕ್ಷರು ವಕೀಲರ ಸಂಘ (ರಿ), ಉಡುಪಿ,ರೊನಾಲ್ಡ್ ಪ್ರವೀಣ್‌ ಕುಮಾರ್, ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘ (ರಿ), ದೀಪ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. , ಶ್ಯಾಮ್ ಪ್ರಕಾಶ್, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ನಿರ್ಮಲಾ ಎಸ್. 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ, ವಿನಾಯಕ ವಾನಖಂಡೆ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಉಡುಪಿ , ಜೀತು ಆರ್. ಎಸ್, 4 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಉಡುಪಿ,ಸುಬ್ರಹ್ಮಣ್ಯ ಆಚಾ‌, ವಲಯ ಅರಣ್ಯ ಅಧಿಕಾರಿ, ಉಡುಪಿ ವಲಯ ,ಗುರುರಾಜ್ ಕಾವ್ರಾಡಿ, ನವೀನ್, ರಶ್ಮಿ, ಉಪ ವಲಯ ಅರಣ್ಯ ಅಧಿಕಾರಿಗಳು, ಉಡುಪಿ
ಕೇಶವ ಪೂಜಾರಿ, ವಿತೇಶ್, ಮನೀಶ್, ಅಶ್ವಿನ್, ಅರಣ್ಯ ರಕ್ಷಕರು, ಉಡುಪಿ ವಲಯ ಮತ್ತು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Latest Indian news

Popular Stories