ನೀರಿನ ಅರವಟಿಕೆ ಉದ್ಘಾಟನೆ ಬಳ್ಳಾರಿ

ಬಳ್ಳಾರಿ ನಗರದಲ್ಲಿ ಶ್ರೀ ಕನಕ ದುರುಗಮ್ಮ ದೇವಸ್ಥಾನದ ಹತ್ತಿರ, ಮ್ಯಾಕ್ಸ್ ಶಾಪಿಂಗ್ ಎದುರುಗಡೆ, ಕರ್ನಾಟಕ ರಕ್ಷಣಾ ವೇದಿಕ ಯುವ ಸೇನೆ ವತಿಯಿಂದ ನೀರಿನ ಅರವಟಿಕೆ ಆಳವಡಿಸಲಾಗಿದೆ.

ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಗಾಂಧಿನಗರ ಪೊಲೀಸ್ ಠಾಣೆಯ ಸನ್ಮಾನ್ಯ ಇನ್ಸ್ಪೆಕ್ಟರಾದ ಹಾಳೇಶ್ ರವರಿಂದ ಗುರುವಾರ ಬೆಳಿಗ್ಗೆ ಉದ್ಘಾಟನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಬೀಸಿಲು ಜಾಸ್ತಿ ಇದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ನೀರಿನ ಅವಕಾಶ್ಯಕತೆ ಬಹಳ ಇರುವುದರಿಂದ ಈ ನೀರಿನ ಅರವಟಿಕೆಯನ್ನು.

ಕರವೇ ಯುವ ಸೇನೆ ಅಧ್ಯಕ್ಷರಾರ ಮಾಡಿರುವ ಸೇವೆಗೆ ಕೃತೆಜ್ಞತೆಯನ್ನು ತೋರಿದರು, ಈ ಸಂದರ್ಭದಲ್ಲಿ ಮಾಸ್ಕ್ನ್ನು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕರವೇ ಯುವ ಸೇನೆ ರಾಜ್ಯ ಸಂಘಟನೆಯ ಕಾರ್ಯದರ್ಶಿ ಬಿ.ಟಿ ಮಂಜುನಾಥ, ಜಿಲ್ಲಾ ಗೌರವಧ್ಯಕ್ಷರು ಟಿ.ಮಾರೆಣ್ಣ, ಜಿಲ್ಲಾಧ್ಯಕ್ಷರು ಗಡ್ಡಂ ತಿಮ್ಮಪ್ಪ.

ಜಿಲ್ಲಾ ಪ್ರದಾನ ಕಾರ್ಯಾದರ್ಶಿ ದೇವರಳ್ಳಿ ಗಾದಿಲಿಂಗೇಶ್, ತಾಲ್ಲೂಕು ಅಧಕ್ಯರಾದ ಬಿ.ಗಣೇಶ್, ಹೊಸಪೇಟೆ ಅಧ್ಯಕ್ಷರು ಇಸ್ಮಾಯಿಲ್, ಸಂಘಟನೆಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂದು ಪತ್ರಿಕೆಗೆ ತಿಳಿಸಲಾಯಿತು.

ಹೆಚ್ಚಿನ ಮಾಹಿತಿಗಾಗಿ :-

ಗಡ್ಡಂ ತಿಮ್ಮಪ್ಪ
ಅಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕ ಯುವ ಸೇನೆ
ಮೋ: ೮೦೭೩೭೪೦೦೬೨

Latest Indian news

Popular Stories