ಚಾಮರಾಜನಗರ :ಚಾಮರಾಜನಗರದಲ್ಲಿ ಹೊಸದಾಗಿ ಸಫಾರಿ ಕೇಂದ್ರವನ್ನು ಆರಂಭಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಸಫಾರಿ ಕೇಂದ್ರ ಆರಂಭವಾಗಿದ್ದು, ಈಗಾಗಲೇ ಬಂಡೀಪುರ ಬಿಆರ್ಟಿ ಪ್ರದೇಶದಲ್ಲಿ ಸಫಾರಿ ಸೌಲಭ್ಯವಿದೆ.ಇನ್ಮುಂದೆ ಮಹದೇಶ್ವರ ವನ್ಯಧಾಮದಲ್ಲೂ ಸಫಾರಿಗೆ ಅವಕಾಶ ನೀಡಲಾಗುತ್ತಿದ್ದು ಸಫಾರಿಗೆ ಹನೂರು ಶಾಸಕ ಎಂಆರ್ ಮಂಜುನಾಥ್ ಚಾಲನೆ ನೀಡಿದರು.ಪ್ರವಾಸಿಗರಿಗೆ ಬೆಳಗ್ಗೆ ಮತ್ತು ಸಂಜೆ ವೇಳೆ ಸಫಾರಿ ಸೌಲಭ್ಯ ಇರುತ್ತದೆ. ಬೆಳಗ್ಗೆ 6 ರಿಂದ 9 ಗಂಟೆ ಮಧ್ಯಾಹ್ನ 3 ರಿಂದ 6ರವರೆಗೆ ಸಫಾರಿಗೆ ಅವಕಾಶ ಇರಲಿದೆ.ವಯಸ್ಕರಿಗೆ 400 ರೂಪಾಯಿ ಮಕ್ಕಳಿಗೆ 200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.