ಮಳೆ ಕೊರತೆಯಿಂದ ಬೆಲೆ ನಷ್ಟ ರೈತ ಆತ್ಮಹತ್ಯೆ

ಚಿಕ್ಕಮಗಳೂರು:ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ವೈಫಲ್ಯದಿಂದ ಬೆಳೆ ನಷ್ಟವಾದ ಪರಿಣಾಮ ರೈತನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಡೂರು ತಾಲೂಕಿನ ಲಿಂಗದಹಳ್ಳಿ ನಿವಾಸಿ ಕೃಷ್ಣಾನಾಯ್ಕ್ ಎಂಬುವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರಿಗೆ 55 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

3 ಲಕ್ಷ ಸಾಲ ಮಾಡಿ ರಾಗಿ, ಜೋಳದ ಬೆಳೆಗಳನ್ನು ಕೃಷಿ ಜಮೀನಿನಲ್ಲಿ ಬಿತ್ತಿದ್ದರು. ಆದರೆ, ಮಳೆ ಇಲ್ಲದ ಕಾರಣ ಬೆಳೆ ನಾಶವಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಡೂರು ತಾಲೂಕಿನಲ್ಲಿಯೇ ಕಳೆದ 40 ದಿನಗಳಲ್ಲಿ ರೈತರ ಐದನೇ ಆತ್ಮಹತ್ಯೆ ಇದಾಗಿದೆ.

Latest Indian news

Popular Stories