ಚಿಕ್ಕಮಗಳೂರು:ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ವೈಫಲ್ಯದಿಂದ ಬೆಳೆ ನಷ್ಟವಾದ ಪರಿಣಾಮ ರೈತನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಡೂರು ತಾಲೂಕಿನ ಲಿಂಗದಹಳ್ಳಿ ನಿವಾಸಿ ಕೃಷ್ಣಾನಾಯ್ಕ್ ಎಂಬುವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರಿಗೆ 55 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
3 ಲಕ್ಷ ಸಾಲ ಮಾಡಿ ರಾಗಿ, ಜೋಳದ ಬೆಳೆಗಳನ್ನು ಕೃಷಿ ಜಮೀನಿನಲ್ಲಿ ಬಿತ್ತಿದ್ದರು. ಆದರೆ, ಮಳೆ ಇಲ್ಲದ ಕಾರಣ ಬೆಳೆ ನಾಶವಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಡೂರು ತಾಲೂಕಿನಲ್ಲಿಯೇ ಕಳೆದ 40 ದಿನಗಳಲ್ಲಿ ರೈತರ ಐದನೇ ಆತ್ಮಹತ್ಯೆ ಇದಾಗಿದೆ.