ಮಡಿಕೇರಿ,ಸೆ,29:-ರಾಷ್ಟ್ರ ಭಕ್ತ, ಹುತಾತ್ಮ, ಭಗತ್ ಸಿಂಗ್ ಅವರ 113 ನೇ ಜನ್ಮ ದಿನಾಚರಣೆಯನ್ನು ಹುಲಿತಾಳದ ಭಗತ್ ಯುವಕ ಸಂಘದ ವತಿಯಿಂದ ಆಚರಿಸಲಾಯಿತು. ಸಂಘದ ಗೌರವಾಧ್ಯಕ್ಷ ಪಿ ಎಸ್ ರವಿಕೃಷ್ಣ,ಕಾರ್ಯದರ್ಶಿ ಹೆಚ್ ಎಂ ನಂದಕುಮಾರ್ ಭಗತ್ ಸಿಂಗ್ ಅವರ ಜೀವನ ಪರಿಕ್ರಮದ ಕುರಿತು ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್ ಎನ್ ವಿನೋದ್,ಉಪಾಧ್ಯಕ್ಷ ಪಿ ಬಿ ಗೌತಮ್, ಹೆಚ್ ಜಿ ದರ್ಶನ್,ಹೆಚ್.ಎಂ ಪ್ರಸನ್ನ,ಹೆಚ್.ಜಿ ಸೂರ್ಯ,ಹೆಚ್.ಪಿ ಪ್ರತೀಪ್ ಮತ್ತಿತರರು ಹಾಜರಿದ್ದರು.