ಉತ್ತರಪ್ರದೇಶ: ಶಾಲೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಶಾಲಾ ಬಸ್ ಡಿಕ್ಕಿಯಾಗಿ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪುರ ಗ್ರಾಮದ ನಿವಾಸಿ ಗುರ್ಮೆಜ್ ಸಿಂಗ್ ಅವರು ತಮ್ಮ ಮಕ್ಕಳಾದ ಜೀತ್ ಪಾಲ್ (14) ಮತ್ತು ಹರ್ಮೀತ್ ಸಿಂಗ್ (9) ಅವರನ್ನು ಸ್ಕೂಟರ್ನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.
ಮಾರ್ಗ ಮಧ್ಯೆ ರುದ್ರಪುರ ಗ್ರಾಮದ ಬಳಿ ಸ್ಕೂಟರ್ ನಿಲ್ಲಿಸಿದ್ದ ಗುರ್ಮೆಜ್, ಮತ್ತೊಂದು ಕೆಲಸದ ಸಲುವಾಗಿ ಹೋಗಿದ್ದರು. ಈ ವೇಳೆ ಹಿಂದಿನಿಂದ ಬಂದ ಬಸ್, ರಸ್ತೆಯಲ್ಲಿ ನಿಂತಿದ್ದ ಮಕ್ಕಳಿಗೆ ಡಿಕ್ಕಿಯಾಗಿದೆ.ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.