ಮುಂಬೈ: ಮಹಾರಾಷ್ಟ್ರ ಅಧಿವೇಶನದಲ್ಲಿ ಹನ್ನೆರಡು ಮಂದಿ ಶಾಸಕ ಮೇಲೆ ವಿಧಿಸಿದ್ದ ಅಮಾನತು ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
ಶಾಸಕರನ್ನು ಅಮಾನತುಗೊಳಿಸುವುದು ಕಾನೂನು ಬಾಹಿರ ಮತ್ತು ಅಸಂವಿಧಾನಿಕವೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಒಂದು ವರ್ಷದ ಕಾಲದ ಮಟ್ಟಿಗೆ ಹನ್ನೆರಡು ಮಂದಿ ಶಾಸಕರನ್ನು ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕರು ಸುಪ್ರೀಮ್ ಮೆಟ್ಟಿಲು ಹತ್ತಿದ್ದರು. ಇದೀಗ ಅವರ ದೂರನ್ನು ಮಾನ್ಯ ನ್ಯಾಯಾಲಯ ಎತ್ತಿ ಹಿಡಿದು ಅಮಾನತನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.