ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಹಿಳೆಯ ಸಮಾವೇಶ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಲತಾ ಮತ್ತು ಮೀನಾಕ್ಷಿ ಲೇಖಿ ಅತಿಥಿಯಾಗಿದ್ದರು. ಆದರೆ ಸಮಾವೇಶಕ್ಕೆ ತಡವಾಗಿ ಬಂದ ಅತಿಥಿಗಳಿಗೆ ಖಾಲಿ ಖುರ್ಚಿ ಸ್ವಾಗತಿಸಿದೆ.
ಬೆಳಿಗ್ಗೆ 11 ಗಂಟೆಗೆ ಆಗಮಿಸ ಬೇಕಾಗಿದ್ದ ಅತಿಥಿಗಳು ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಕಾರಣ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡು ಕಾಲ್ಕಿತ್ತಿದ್ದಾರೆ. ಆದ್ದರಿಂದ ಖುರ್ಚಿಗಳು ಖಾಲಿಯಾಗಿದ್ದು ವಿಧಿಯಿಲ್ಲದೆ ಖಾಲಿ ಖುರ್ಚಿಗಳಿಗೆ ಮಂಡ್ಯ ಹಾಲಿ ಸಂಸದೆ ಮಾತಡಬೇಕಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ” ಈ ಭಾಗದಲ್ಲಿ ಅಂಬರೀಷ್ ಅವರಿಗೆ ಬಹಳಷ್ಟು ಆಪ್ತರಿದ್ದರು. ಇಲ್ಲಿ ಬಂದಾಗ ಖುಷಿಯಾಗುತ್ತದೆ. ಬಹಳಷ್ಟು ಕಡೆ ಚುನಾವಣೆಯ ಜವಾಬ್ದಾರಿ ತನಗಿದೆ” ಎಂದರು.
“ದರ್ಶನ್ ಅವರನ್ನು ಬೇರೆ ಪಕ್ಷಕ್ಕೆ ಪ್ರಚಾರಕ್ಕೆ ಹೋಗು ಅಥವಾ ಹೋಗ್ಬೇಡ ಅಂಥ ಯಾವತ್ತೂ ಹೇಳಲ್ಲ. ನಾನು ನಿಂತಿದ್ದರೆ ಅವರು ಖಂಡಿತ ನನ್ನ ಪರವಾಗಿ ಬರುತ್ತಿದ್ದರು. ರಾಜಕೀಯವಾಗಿ ಬೇರೆಯವರ ಕುರಿತು ಚರ್ಚಿಸುದಿಲ್ಲ” ಎಂದು ಹೇಳಿದರು.
“ಶಾಸಕರೊಂದಿಗೆ ಇರುವ ಫೋಟೊಗಳನ್ನು ಹಾಕಿ ಕಾಂಗ್ರೆಸ್ ನೊಂದಿಗೆ ಸಂಪರ್ಕದಲ್ಲಿದ್ದೇನೆ ಎಂಬ ಸುಳ್ಳು ಮಾಹಿತಿ ಹರಡಲಾಗುತ್ತಿದೆ” ಎಂದು ಹೇಳಿದರು.
ವೀಡಿಯೋ: