ಕೊಡಗು: ನೆನ್ನೆ ದಿನ ಸ್ನೇಹಿತರೊಂದಿಗೆ ಹೊಳೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದ್ದು ಇಂದು ಮೃತ ದೇಹ ಪತ್ತೆಯಾಗಿದೆ.
ಸುಂಟಿಕೊಪ್ಪ ಸಮೀಪದ ಮತ್ತಿಕಾಡ್ ವಿಜಯ ಎಸ್ಟೇಟ್ ನಿವಾಸಿ ನಿಶಾಂತ್ ಎಂಬಾತ ವಾಲ್ನೂರು ಹೊಳೆಯಲ್ಲಿ ಜಲ ಸಮಾಧಿಯಾಗಿರುವ
ಶುಕ್ರವಾರ ಸಂಜೆ ವಾಲ್ನೂರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ಮತ್ತಿಕಾಡ್ ವಿಜಯ್ ಎಸ್ಟೇಟಿನ ನಿಶಾಂತ್ ಅವರ ಮೃತ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ದುಬಾರೆ RAFTING ತಂಡದವರು ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲೆತ್ತಿ ದಡಕ್ಕೆ ತರುವಲ್ಲಿ ಶ್ರಮಿಸಿದರು.