ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಹಾಡಿ ನಿವಾಸಿಗಳಿಗೆ ನೆರವು

ಮಡಿಕೇರಿ ಜೂ.೮ : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಘಟಕ ಜಿಲ್ಲೆಯ ವಿವಿಧ ಭಾಗಗಳ ಆದಿವಾಸಿ ಹಾಡಿಯ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿತು.
ಗೋಣ ಗದ್ದೆ, ಕೆರೆದಟ್ಟು, ಕೋಡಂಗೆ, ಸೀತಾ ಕಾಲೋನಿಯ ೬೦ ಆದಿವಾಸಿ ಕುಟುಂಬಗಳಿಗೆ ಆಹಾರದ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಕಡುಬಡವರು, ದುರ್ಬಲರು ಹಾಗೂ ಕಾರ್ಮಿಕರ ನೆರವಿಗೆ ಸಮಿತಿ ಸದಾ ಸಿದ್ಧವಿದೆ ಎಂದರು.
ಗೌರವಾಧ್ಯಕ್ಷ ಡಿ.ಎಸ್ ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಹೇಮಂತ್ ಪ್ರಮುಖರಾದ ಮೋಹನ್, ತಾಯಮ್ಮ, ಜಲೀಲ್, ರೋಷನ್ ಇದ್ದರು. ಫೋಟೋ :: ಭೂಮಿ

Latest Indian news

Popular Stories