ಪೇಜಾವರ ಶ್ರೀ ಪದ್ಮವಿಭೂಷಣ: ಮೋದಿಯನ್ನು ಹೊಗಳಿದ ಕಾಂಗ್ರೆಸ್ ಮುಖಂಡ ಪ್ರಮೋದ್ ‌ಮಧ್ವರಾಜ್

ಉಡುಪಿ: ಶ್ರೀ ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿದ ಹಿನ್ನಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ಮಠಕ್ಕೆ ಪ್ರಶಸ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಶಸ್ತಿ ನೀಡಿದ ಕಾರಣಕ್ಕೆ ಮೋದಿಯನ್ನು ಗುಣಗಾನ ಮಾಡಿ ಸುದ್ದಿಯಲ್ಲಿದ್ದಾರೆ.

ಈ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ವಾಮೀಜಿ ಅತ್ಯಂತ ಮುಗ್ಧರಾಗಿದ್ದರು. ಕುವೆಂಪು ಪ್ರತಿಪಾದಿಸಿದಂತೆ ಜೀವಮಾನವಿಡಿ ವಿಶ್ವ ಮಾನವರಾಗಿ ಬದುಕಿದರು ಎಂದು ಹೇಳಿದರು.

ಅವರ ಮನಸ್ಸು ಮಗುವಿನ ಮನಸ್ಸಾಗಿತ್ತು. ಅವರು ನಿರಂತರವಾಗಿ ವಿಶ್ವಮಾನವರಾಗಿ ಉಳಿದಿದ್ದರು ಎಂದು ದಿವಂಗತ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಮುಕ್ತ ಕಂಠದಿಂದ ಹೊಗಳಿದರು. ನಮ್ಮ ಜೀವಿತವಾಧಿಯಲ್ಲಿ ಅವರ ಸಂಪರ್ಕಕ್ಕೆ ಬಂದದ್ದು ನಮ್ಮ ಜೀವನದ ಅತೀ ದೊಡ್ಡ ಆಸ್ತಿ ಎಂದರು.

ಈ ಮುಂಚೆಯಲ್ಲ ಅರ್ಜಿ ಹಾಕಿ ಪ್ರಶಸ್ತಿ ಸಿಗುತ್ತಿತ್ತು. ಇದೀಗ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಪ್ರಶಸ್ತಿ ಹುಡುಕಿಕೊಂಡು ಹೋಗುವ ಸಂದರ್ಭ ಬಂದಿದೆ ಎಂದರು. ಹಾಗೆ ಸ್ವಾಮೀಜಿಯವರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ ಎಂದರು. ವಿರೋಧ ಪಕ್ಷದಲ್ಲಿದ್ದಕೊಂಡು ಆಡಳಿತ ಪಕ್ಷ ಒಳ್ಳೆಯ ಕೆಲಸ ಮಾಡಿದರೆ ಶ್ಲಾಘಿಸುತ್ತೇನೆ. ಈ ವಿಚಾರದಲ್ಲಿ ಮೋದಿಯವರ ಗುಣಗಾನ ಮಾಡುತ್ತೇನೆ ಎಂದರು.

Latest Indian news

Popular Stories