ಬೈಂದೂರು: ವ್ಯಕ್ತಿ ನಾಪತ್ತೆ

ಬೈಂದೂರು: ಕಟ್ಟಿಂಗ್ ಶಾಪ್’ಗೆ ಎಂದು ಹೊರಟ ವ್ಯಕ್ತಿ ನಾಪತ್ತೆಯಾದ ಕುರಿತು ದೂರು ದಾಖಲಾಗಿದೆ.

ನಾಪತ್ತೆಯಾದ ವ್ಯಕ್ತಿ ಬೈಂದೂರಿನ ಹೇರೂರು ಗ್ರಾಮದ ಹೆಚ್.ಶೇಖರ ಗೌಡ (40) ಎಂದು ತಿಳಿದು ಬಂದಿದೆ.

ಮೇ 5 ರಂದು ಮನೆಯಲ್ಲಿ ಊಟ ಮಾಡಿ ತಾಯಿಯವರಲ್ಲಿ ಕಟ್ಟಿಂಗ್ ಶಾಪ್ ಹೋಗಿ ಬರುವುದಾಗಿ ಹೇಳಿ ಹೋದವರು ಸಂಜೆ 4:30 ಗಂಟೆಗೆ ಊರಿಗೆ ಬರುವ ಬಸ್ಸಿಗೆ ಬಾರದೇ ಇದ್ದು, ಆಸುಪಾಸಿನಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೇ, ಈವರೆಗೂ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.

ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 124/2024 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories