ಉಡುಪಿ | ಲಾರಿ ಸಹಿತ ಗೋಡಂಬಿ ವಂಚನೆ ಪ್ರಕರಣ: ಓರ್ವ ಆರೋಪಿ ಬಂಧನ

ಬ್ರಹ್ಮಾವರ,: ಬ್ರಹ್ಮಾವರದಿಂದ ಗುಜರಾತ್ಗೆ ಲಾರಿಯಲ್ಲಿ ಲೋಡ್ ಮಾಡಿ ಕಳುಹಿಸಲಾದ ಕೋಟ್ಯಂತರ ರೂ. ವೌಲ್ಯದ ಗೋಡಂಬಿಯನ್ನು ಸಂಬಂಧಪಟ್ಟವರಿಗೆ ತಲುಪಿಸದೇ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಮಹೇಂದ್ರಪುರಿ ಲಾಲ್ಪುರಿ ಗುಸ್ಸಾಯಿ ಬಂಧಿತ ಆರೋಪಿ. ಮಹಾರಾಷ್ಟ್ರದ ವಿರಾರ್ ಮತ್ತು ಗನ್ಸೋಲಿ ಎಂಬಲ್ಲಿಂದ ಗೊಂಡಬಿ ತುಂಬಿದ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಬಂಧಿತನಿಂದ ಟ್ರಕ್ ಸಹಿತ ಒಟ್ಟು 88,37,430ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬನ್ನಂಜೆಯ ಮೋಹನ ದಾಸ್ ಎಂಬವರ ಮಾಲಕತ್ವದ ಬ್ರಹ್ಮಾವರ ತಾಲೂಕಿನ ಶಿರೂರು ಗ್ರಾಮದ ಮೂಡುಗುಡ್ಡೆ ಎಂಬಲ್ಲಿರುವ ಶ್ರೀ ಕೃಷ್ಣ ಕ್ಯಾಶೋ ಫ್ಯಾಕ್ಟರಿಯಿಂದ ಎ.2ರಂದು ಮೊದನ್ ಮೋಸಿನ್ ಎಂಬವರ ಲಾರಿಯಲ್ಲಿ ಗೋಡಂಬಿಯನ್ನು ಸೂರತ್ನ ಟ್ರೇಡರ್ಸ್ಗೆ 21.24 ಟನ್ ಹಾಗೂ ಅಹಲ ಬಾದ್ನ ಟ್ರೇಡರ್ಸ್ಗೆ 3.450 ಟನ್ ಗೋಂಡಬಿಯನ್ನು ಲೋಡ್ ಮಾಡಿ ಲಾರಿಯ ಚಾಲಕ ರಂಜಾನ್ ಸೋದ ಮತ್ತು ಮಹೇಂದ್ರಪುರಿ ಲಾಲ್ಪುರಿ ಗುಸ್ಸಾಯಿ ಅವರ ಜೊತೆಯಲ್ಲಿ ಸೂರತ್ಗೆ ಕಳುಹಿಸಲಾಗಿತ್ತು.ಆದರೆ ಎ.5ರಂದು ಬೆಳಿಗ್ಗೆ ಸೂರತ್ ಮತ್ತು ಅಹಮ್ಮದ್ಬಾದ್ನಲ್ಲಿರುವ ಟ್ರಡರ್ಸ್ಗೆ ತಲುಪ ಬೇಕಾಗಿದ್ದ ಸೊತ್ತು ಮತ್ತು ಲಾರಿಯು ತಲುಪಿಸದ ಬಗ್ಗೆ ಮಾಹಿತಿ ದೊರೆತಿತ್ತು. ಆರೋಪಿಗಳು 1,21,76,598 ರೂ ಮೌಲ್ಯದ 24.69 ಮೆಟ್ರಿಕ್ ಟನ್ ಗೋಡಂಬಿಯನ್ನು ತಲುಪಿಸ ಬೇಕಾದವರಿಗೆ ತಲುಪಿಸದೇ ಮೋಸ ಮಾಡಿ ವಂಚನೆ ಮಾಡಿರುವುದಾಗಿ ದೂರಲಾಗಿದೆ.

ಉಡುಪಿ ಎಸ್ಪಿ ಡಾ.ಅರುಣ್ ಕೆ. ನಿರ್ದೇಶನದಂತೆ ನಡೆದ ಈ ಕಾರ್ಯಾ ಚರಣೆ ಉಡುಪಿ ಸೆನ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಎಸ್ಸೈ ಪವನ್ ನಾಯಕ್, ಸಿಬ್ಬಂದಿ ಕೃಷ್ಣ ಪ್ರಸಾದ್, ಜೀವನ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ನಾಯ್ಕಿ, ನಿತಿನ್ ಭಾಗವಹಿಸಿದ್ದಾರೆ

Latest Indian news

Popular Stories