ಬೆಂಗಳೂರು : ನಾಯಕತ್ವ ಬದಲಾವಣೆ ಕುರಿತು ಭಾನುವಾರ ಸಂಜೆ ಬಿಜೆಪಿಯ ದೆಹಲಿ ನಾಯಕರು ಸ್ಪಷ್ಟ ಸಂದೇಶ ನಿಡುವ ಸಾಧ್ಯತೆ ಇದ್ದು, ಮುಮದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಹೈಕಮಾಂಡ್ ಸಂದೇಶ ಬರುವ ಕುರಿತು ಸ್ವತ: ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದೂ ಬಿಎಸ್ವೈ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಖಚಿತ ಎನ್ನುವುದಕ್ಕೆ ಬಿಎಸ್ವೈ ಹೇಳಿಕೆಗಳೇ ಸಾಕ್ಷಿಯಾಗಿವೆ.
ಯಡಿಯೂರಪ್ಪ ಬದಲಾವಣೆ ಖಚಿತ ಎನ್ನುವುದರನ್ನು ಸಂಶಯ ಇದ್ದಿರಲಿಕ್ಕಿಲ್ಲ. ಆದರೆ, ನಂತರ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರು ಕೂಡಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಗಣಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿ ಮುಂತಾದ ನಾಯಕರ ಹೆಸರುಗಳು ಚರ್ಚೆಯಲ್ಲಿವೆ. ಮುಂಚೆ ಸಿಟಿ ರವಿ ಹೆಸರು ಮುನ್ನೆಲೆಗೆ ಬಂದಿತ್ತು. ನಂತರ ಪ್ರಹ್ಲಾದ್ ಜೋಶಿ ಅವರ ಹೆಸರು ಓಡಾಡಿತ್ತು. ಇದೀಗ ಮುರುಗೇಶ ನಿರಾಣಿ ಅವರ ಸರದಿ. ಈ ಮಧ್ಯೆ ಮುರುಗೇಶ ನಿರಾಣಿಗೆ ಅವರಿಗೆ ದೆಹಲಿಗೆ ಬರುವಂತೆ ಸಂದೇಶ ಬಂದಿದ್ದು, ಸಂಜೆಯೇ ಅವರು ರಾಷ್ಟç ರಾಜಧಾನಿಗೆ ತೆರಳಲಿದ್ದಾರೆ. ಮುರುಗೇಶ ನಿರಾಣಿ ಅವರ ಅದೃಷ್ಟ ಖುಲಾಯಿಸುವ ಸಾಧ್ಯತೆ ಹೆಚ್ಚು ಎಂಬ ಮಾತು ಕೇಳಿ ಬರುತ್ತಿವೆ.