ನವದೆಹಲಿ: ಕೆಲವು ಮಾಧ್ಯಮಗಳು ಜೈ ಭೀಮ್ ಚಲಚಿತ್ರದಲ್ಲಿ ಐಜಿ ಪೊಲೀಸ್ ಅಧಿಕಾರಿಯ ಪಾತ್ರಧಾರಿ ಪ್ರಕಾಶ್ ರೈ ಹಿಂದಿ ಮಾತನಾಡುವ ಒರ್ವ ಮಾತನಾಡುವ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದರು ಎಂದು ಗುಲ್ಲೆಬ್ಬಿಸುತ್ತಿದ್ದಾರೆ.
ಆದರೆ ವಾಸ್ತವದಲ್ಲಿ ದಶಕಗಳಿಂದ ಉತ್ತರ ಭಾರತದ ಜನರು ದಕ್ಷಿಣ ಭಾರತದ ದ್ರಾವಿಡ ರಾಜ್ಯಗಳ ಮೇಲೆ ಹಿಂದಿ ಹೇರುತ್ತಿವವರ ವಿರುದ್ಧದ ಪ್ರತಿರೋಧದ ರೂಪಕವೆಂದು ಸಾಮಾಜಿಕ ಜಾಲತಾಣದಲ್ಲಿ ಕರೆಯಲಾಗುತ್ತಿದೆ.
ಇದರ ನಡುವೆ ಕೆಲವರು ಪ್ರಕಾಶ್ ರಾಜ್ ಅವರ ಮೇಲಿನ ದ್ವೇಷವನ್ನು ಈ ದೃಶ್ಯವನ್ನು ಉಲ್ಲೇಖಿಸಿ ಪ್ರಸ್ತಾಪಿಸಿ ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಜೈ ಭೀಮ್ ಚಲಚಿತ್ರ ಭಾರೀ ಸುದ್ದಿಯಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಸೇರಿದಂತೆ ಎಲ್ಲರ ನಟನೆಗಾಗಿ ಭಾರೀ ಮೆಚ್ಚುಗೆ ಪಾತ್ರವಾಗಿದೆ. ಮೇಲ್ಜಾತಿಯ, ಅಧಿಕಾರಿಗಳ ದೌರ್ಜನ್ಯಕ್ಕೆ ಈಡಾದ ಇರುಳಿಗರ ಬದುಕಿನ ವ್ಯಥೆ ಅದ್ಬುತವಾಗಿ ಮೂಡಿ ಬಂದಿದೆ.