ಬೈ ಬೈ ಭಗವಂತ ಖೂಬಾ ಸಂಕಲ್ಪ ಮಾಡಿ : ಸಚಿವ ಈಶ್ವರ್ ಖಂಡ್ರೆ

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಬೈ ಬೈ ಭಗವಂತ ಖೂಬಾ ಎಂದು ಸಂಕಲ್ಪ ಮಾಡಬೇಕು. ಅವರು ಈ ಸಲದ ಚುನಾವಣೆಯಲ್ಲಿ ಸೋತರೆ ಮರಳಿ ಬರುವುದಿಲ್ಲ’ ಎಂದು ನಗರದ ಗಣೇಶ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಕಿಡಿ ಕಾರಿದರು

‘ಸ್ವಪಕ್ಷೀಯ ಶಾಸಕರೇ ಭಗವಂತ ಖೂಬಾ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಬಸವಕಲ್ಯಾಣ ಶಾಸಕ ಚಪ್ಪಲಿಯಿಂದ ಹೊಡೆದರು. ಇವರಿಗೆ ಮಾನ, ಮರ್ಯಾದೆ ಇಲ್ಲವೇ?’ ಎಂದು’ ಪ್ರಶ್ನಿಸಿದರು.

ಭಗವಂತ ಖೂಬಾ ಅವರು ಏನು ಘನಂದಾರಿ ಕೆಲಸ ಮಾಡಿದ್ದಾರೆ. ಯಾರದ್ದಾದರೂ ಸುಖ-ದುಃಖ ಕೇಳಿದ್ದಾರಾ? ಕೋವಿಡ್‌ ಬಂದಾಗ ಇವರು ಜನರಿಗೆ ಆಕ್ಸಿಜನ್‌, ಔಷಧಿ ವ್ಯವಸ್ಥೆ ಮಾಡುವುದು ಬಿಟ್ಟು ಮೌನಚರಣೆ ಮಾಡಿದ್ದರು. ನನಗೆ ಕೋವಿಡ್‌ ಬಂದಾಗ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಮಗ ಸಾಗರ್‌ ಖಂಡ್ರೆ ಜನರ ಮಧ್ಯೆ ಓಡಾಡಿ ಜನ ಸೇವೆ ಮಾಡಿದ್ದ. ಬಿಜೆಪಿಯ ಭಗವಂತ ಖೂಬಾ ಬೇಕಾ? ಅಥವಾ ಜನಸೇವಕ ಸಾಗರ್‌ ಖಂಡ್ರೆ ಬೇಕಾ? ಎಂಬುದನ್ನು ಜನ ತೀರ್ಮಾನಿಸಬೇಕು ಎಂದ್ರು.

Latest Indian news

Popular Stories