ನಿರ್ಮಿತಿಯಲ್ಲಿ ಲೆಕ್ಕಿಗರ ಹುದ್ದೆಗಾಗಿ ಅರ್ಜಿ ಅಹ್ವಾನ

ಬೀದರ ಜೂನ್ 25 (ಕರ್ನಾಟಕ ವಾರ್ತೆ): ನೌಬಾದ್ ಹತ್ತಿರದ ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ 01 ಲೆಕ್ಕಿಗರ ಹುದ್ದೆಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಇಚ್ಛೇಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 29.06.2021ರ ರ ಸಂಜೆ 05.30 ಗಂಟೆಯವರೆಗೆ ಮಾತ್ರ. ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ರೂ.50 ಶುಲ್ಕ ಪಾವತಿಸಿ ಖುದ್ದಾಗಿ ಈ ಕಛೇರಿಯಿಂದ ನಿಗದಿತ ಅರ್ಜಿ ಪಡೆದು, ಭರ್ತಿ ಮಾಡಿ, ಅರ್ಜಿಯ ಜೊತೆಯಲ್ಲಿ ಕೇಳಲಾದ ದಾಖಲಾತಿಗಳನ್ನು ಸ್ವಯಂ ಧೃಡಿಕರಣದೊಂದಿಗೆ ಖುದ್ದಾಗಿ ಜೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಧೋದ್ಧೇಶ ಸಹಕಾರ ಸಂಘ (ನಿ) ಜಿಲ್ಲಾಧಿಕಾರಿಗಳ ಕಛೇರಿ, ಬೀದರದಲ್ಲಿ ಸಲ್ಲಿಸಬೇಕು.
ದಿನಾಂಕ 30.06.2021ರಂದು ಬೆಳಗ್ಗೆ 11.00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಸದರಿ ಹುದ್ದೆಗೆ ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಲ್ಪಟ್ಟ ಕನಿಷ್ಠ ವೇತನ ಪ್ರಕಾರ ವೇತನ ನೀಡಲಾಗುವುದು ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೀದರ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ 9242483572ಕ್ಕೆ ಸಂಪರ್ಕಿಸಬೇಕು.
ಈ ಹುದ್ದೆಗಾಗಿ ಅರ್ಜಿ ಸಲ್ಲಿಸುವವರು ಎಂ.ಕಾA. ಪದವಿ ಪಡೆದಿರಬೇಕು ಮತ್ತು ಟ್ಯಾಲಿ ಇಆರ್‌ಪಿನಲ್ಲಿ ನಿಪೂಣತೆ ಹೊಂದಿರಬೇಕು. ಆಭ್ಯರ್ಥಿಯು ಲೆಕ್ಕ ಪತ್ರಕ್ಕೆ ಸಂಬAಧಿಸಿದAತೆ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು. ಯಾವುದೇ ಸರ್ಕಾರಿ ಕಛೇರಿಯಲ್ಲಿ ಅಥವಾ ಸರ್ಕಾರಿ ಯೋಜನೆಯಲ್ಲಿ ಕೆಲಸದ ಅನುಭವ ಹೊಂದಿರಬೇಕು. ಕಡ್ಡಾಯವಾಗಿ ಕನ್ನಡ ಹಾಗೂ ಇಂಗ್ಲಿಷನ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷ ಒಳಗಿನವರಾಗಿರಬೇಕು ಎಂದು ಜೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಧೋದ್ಧೇಶ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ.

Latest Indian news

Popular Stories