ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ

ಬೀದರ ಜುಲೈ 30 (ಕರ್ನಾಟಕ ವಾರ್ತೆ): ಗೋಡಂಪಳ್ಳಿ ಗ್ರಾಮದ ಶಿವಾರದ ಇಬ್ರಾಹಿಂ ಸಾಬ್ ಅವರ ಹೊಲದಲ್ಲಿನ ಬೇವಿನ ಗಿಡಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ಬೀದರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತ ವ್ಯಕ್ತಿಯ ಅಂದಾಜು ವಯಸ್ಸು 65 ವರ್ಷ, ಎತ್ತರ 5.5, ಕಪ್ಪು ಮೈಬಣ್ಣ, ಚಪ್ಪಟೆ ಮುಖ, ತೆಳ್ಳನೆಯ ಮೃಕಟ್ಟು, ತಲೆಯ ಮೇಲೆ ಬಿಳಿ ಕೂದು ಇದ್ದು, ಮೃತನ ಮೈ ಮೇಲೆ ಬಿಳಿ ಬಣ್ಣದ ಕಮೀಜ ಬಿಳಿ ಧೋತರ ಇರುತ್ತದೆ. ಈ ವ್ಯಕ್ತಿ ಯಾರೆಂದು ತಿಳಿದಿರುವುದಿಲ್ಲ.
ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಬೀದರ ಗ್ರಾಮೀಣ ಪೊಲೀಸ್ ಠಾಣೆ ದೂ.ನಂ.08482-232811 ಅಥವಾ ಪಿ.ಎಸ್.ಐ. ದೂ.ನಂ.9480803449, ಸಿಪಿಐ ಬೀದರ ಗ್ರಾಮೀಣ ವೃತ್ತ ಮೊ.ನಂ.9480803439, ಬೀದರ ಕಂಟ್ರೋಲ್ ರೂಮ್ ದೂ.ನಂ. 08482-226704 ಗೆ ಸಂಪರ್ಕಿಸಲು ಬೀದರ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories