ಶಿರಸಿ: ಮಳೆಯಿಂದ ಸಿದ್ದಾಪುರ ತಾಲೂಕಿನ ಲುಸಿಂಗ್ಟನ್ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.ಸ್ಥಳೀಯರ ಪಾಲಿನ ಕೆಪ್ಪ ಜೋಗ, ಉಂಚಳ್ಳಿ ಜಲಪಾತವು ಮೈದುಂಬಿ ದುಮ್ಮಿಕ್ಕುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪ್ರಸಿದ್ಧ ನದಿ ಅಘನಾಶಿನಿ ತುಂಬಿ ಹರಿಯುತ್ತಿದೆ. ಈ ನದಿಯಲಿ ಉಂಟಾಗುವ ಈ ಜಲಪಾತ ಮೈ ದುಂಬಿ ದುಮ್ಮುಕ್ಕುವ ದೃಶ್ಯವನ್ನ ಪ್ರವಾಸಿಗರು ಸೆರೆ ಹಿಡಿದ್ದಾರೆ.
ಶಿವರಾಜ್ ಕುಮಾರ್, ರಮೇಶ್, ಪ್ರೇಮಾ ನಟಿಸಿದ ನಮ್ಮೂರ ಮಂದಾರ ಹೂವೆ ಚಿತ್ರದ ಚಿತ್ರೀಕರಣ ಇದೆ ಜಲಪಾತದಲ್ಲಿ ನಡೆದಿತ್ತು.
ರವಿವಾರ ಮಳೆ ಸ್ವಲ್ಪ ಇಳಿಮುಖವಾಗಿದ್ದು ಜಲಪಾತದ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಆದರೆ, ಪ್ರವಾಸಿಗರಿಗೆ ಜಲಪಾತದ ಬಳಿ ಎಚ್ಚರಿಕೆಯಿಂದ ಇರುವುದು ಒಳಿತು.