ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿ ಇಟ್ಟಾಗಿದೆ; ಸುಡುದೊಂದೆ ಬಾಕಿ – ಈಶ್ವರಪ್ಪ

ಬೆಂಗಳೂರು: “ರಾವಣ ಬಾಲಕ್ಕೆ ಬೆಂಕಿ ಹಚ್ಚಿದ, ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ. ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರ್ ಎಸ್ಎಸ್ ತಂಟೆಗೆ ಬರಬೇಡಿ. ಹುಷಾರ್” ಎಂದು ಈಶ್ವರಪ್ಪ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ‌ನಿವಾಸದ ಎದುರು ಎನ್ ಎಸ್ ಯುಐ ಕಾರ್ಯಕರ್ತರು ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ್ದನ್ನು ಸಮರ್ಥಿಸಿಕೊಂಡಿದ್ದ ಸಿದ್ದರಾಮಯ್ಯ ” ಚಡ್ಡಿ ಸುಟ್ಟಿದ್ದು ಸಾಂಕೇತಿಕ ಪ್ರತಿಭಟನೆ ” ಎಂದಿದ್ದರು. ಇದೀಗ ಇದನ್ನು ಈಶ್ವರಪ್ಪ ವಿರೋಧಿಸಿದ್ದಾರೆ.

Latest Indian news

Popular Stories