ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಹೆಸರಿನ ಸಲಾಮ್ ಪೂಜೆ ತೆಗೆಯಲು ಆಗ್ರಹಿಸಿದ ವಿಶ್ವ ಹಿಂದು ಪರಿಷತ್

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಪ್ರತಿ ನಿತ್ಯ ನಡೆಯುವ ಸಲಾಮ್ ಪೂಜೆಯನ್ನು ನಿಲ್ಲಿಸಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.

“ಹಿಂದು ವಿರೋಧಿ, ಮತಾಂಧ ಕ್ರೂರಿ ಟಿಪ್ಪುವಿನ ಹೆಸರಿನಲ್ಲಿ ಸಲಾಮ್ ಪೂಜೆ ಮಾಡುವುದು ಬೇಡ” ಎಂದು ವಿ.ಎಚ್.ಪಿ ಆಗ್ರಹಿಸಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಉಡುಪಿ ಜಿಲ್ಲೆಯ ಖ್ಯಾತ ದೇವಸ್ಥಾನವಾಗಿದ್ದು ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಹಲವಾರು ವರ್ಷಗಳಿಂದ ಟಿಪ್ಪು ನೀಡಿದ ಕೊಡುಗೆಗಾಗಿ ಈ ದೇವಸ್ಥಾನದಲ್ಲಿ ಸಲಾಮ್ ಪೂಜೆ ನಡೆಯುತ್ತಿದೆ. ಇದೀಗ ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ವೈಷ್ಯಮದ ಕೆಂಗಣ್ಣಿಗೆ ಈ ಸೌಹರ್ದದ ಬೀಡು ಕೂಡ ಗುರಿಯಾಗಿದೆ.

Latest Indian news

Popular Stories