ನವದೆಹಲಿ: ಭಾನುವಾರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದ ನಂತರ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿಸಲಾಗಿದೆ ಎಂದು ಪಂಜಾಬ್ನಿಂದ ಹಲವಾರು ವರದಿಗಳು ಬಂದಿವೆ.
ಪಂಜಾಬಿನ ಸಂಗ್ರೂರ್ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಿದೆ.
ಕಾಶ್ಮೀರಿ ವಿದ್ಯಾರ್ಥಿಗಳ ಕೊಠಡಿಗಳನ್ನು ದುಷ್ಕರ್ಮಿಗಳ ಗುಂಪು ಧ್ವಂಸಗೊಳಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಗೋಚರಿಸುವ ದೃಶ್ಯಗಳು ಉಲ್ಲೇಖಿಸಿವೆ.
ದಾಳಿಯ ವರದಿಗಳು ಪ್ರಸಾರವಾಗುತ್ತಿದ್ದಂತೆ ಹಲವಾರು ಪತ್ರಕರ್ತರು ಮತ್ತು ನಾಗರಿಕರು ಘಟನೆಯ ಕುರಿತು ಕಾನೂನು ಜಾರಿ ಸಂಸ್ಥೆಗಳ ಗಮನವನ್ನು ಸೆಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯಿಸಿದ್ದಾರೆ.
ನಾಸಿರ್ ಖುಹಮಿ ಟ್ವಿಟ್ಟರ್ನಲ್ಲಿ, “ಭಾಯಿ ಜಿಐಇಟಿ ಸಂಗೂರ್ ಪಂಜಾಬ್ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ #Indpak ಪಂದ್ಯದ ನಂತರ ಹಲ್ಲೆ ನಡೆಸಲಾಯಿತು. ಬಿಹಾರದ ವಿದ್ಯಾರ್ಥಿಗಳು ಅವರ ಕೊಠಡಿಗಳಿಗೆ ನುಗ್ಗಿ ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಕೊಠಡಿಗಳನ್ನು ಧ್ವಂಸಗೊಳಿಸಲಾಗಿದೆ. ಸಭಾಂಗಣಕ್ಕೆ ಹಾನಿ ಮಾಡಿದ್ದಾರೆ. ನಿಂದಿಸಿ ಥಳಿಸಿದ್ದಾರೆಂದು ಹೇಳಿದ್ದಾರೆ.
ಮುಖ್ಯಮಂತ್ರಿ ಚರಣಜಿತ್ ಚನ್ನಿಪತ್ರಕರ್ತರಾದ ಆದಿತ್ಯ ಮೆನನ್ ಮತ್ತು ಗಜಾಲಿ ಮೊಹಮ್ಮದ್ ಅವರನ್ನು ಟ್ಯಾಗ್ ಮಾಡಿ ಹಲ್ಲೆಯ ಕುರಿತು ಉಲ್ಲೇಖಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಪತ್ರಕರ್ತ ಮೊಹಮ್ಮದ್ ಗಝಾಲಿ ಕೂಡ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಭಾಯಿ ಗುರುದಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ವಿದ್ಯಾರ್ಥಿಗಳು ಇಂದು ತಮ್ಮ ಟಿ 20 ಪಂದ್ಯದ ಹಾಸ್ಟೆಲ್ನ ಒಳಗಿನಿಂದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ” ಎಂದು ಅವರು ಪಂಜಾಬ್ ಪೊಲೀಸ್ ಡಿಜಿಪಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರನ್ನು ಟ್ಯಾಗ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬರು ತಾವು ಪಂದ್ಯ ನೋಡುತ್ತಿರುವಾಗ ಯುಪಿ ವಿದ್ಯಾರ್ಥಿಗಳು ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೀಡಿಯೋದಲ್ಲಿ “ನಾವು ಭಾರತೀಯರಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಹಲವಾರು ಕಾಶ್ಮೀರಿಗಳು ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳಾಗಿದ್ದು, ಶ್ರೀನಗರದಲ್ಲಿ ಪಟಾಕಿ ಸಿಡಿಸುವ ಮೂಲಕ ಪಾಕ್ ವಿಜಯೋತ್ಸವ ಆಚರಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಹಿಂದೂ ರಾಷ್ಟ್ರೀಯವಾದಿಗಳನ್ನು ಕೆರಳಿಸಿವೆ ಎನ್ನಲಾಗಿದೆ.