ಸುಕುಮಾರ್ ಶೆಟ್ರಿಗೆ ಪಕ್ಷ ಎಲ್ಲ ಅವಕಾಶ ಕೊಟ್ಟಿದೆ; ಅವರು ಹಠ ಬಿಡುತ್ತಿಲ್ಲ – ಬಿ.ಎಸ್ ಯಡಿಯೂರಪ್ಪ

ಬೈಂದೂರು: ಬಿಜೆಪಿ ಮತ್ತೆ ಅಧಿಕಾರಕ್ಕೆ  ಬರುವುದು ನಿಶ್ಚಿತ. 130- 135 ಸ್ಥಾನಗಳನ್ನು ಗೆಲ್ಲುವುದು ಶತಃಸಿದ್ಧ. ಈ ಬಗ್ಗೆ ಯಾವುದೇ ಅನುಮಾನ ಬೇಡ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಲಿಂಗಾಯತ ಮಾತ್ರವಲ್ಲ ಎಲ್ಲ ಜಾತಿಯವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಹಾಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ರ ಮುನಿಸು ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಅವರಿಗೆ ನಾವೆಲ್ಲ ಮನವಿ ಮಾಡಿ, ‌ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅವರ ಹಠ ಬಿಡುತ್ತಿಲ್ಲ. ಪಕ್ಷ ಅವರಿಗೆ ಅವಕಾಶ ಕೊಟ್ಟಿದೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Latest Indian news

Popular Stories