ಧರ್ಮಾವರಂ, ಆಂಧ್ರಪ್ರದೇಶ: ಬಿಜೆಪಿಯ ಮೈತ್ರಿ ಪಕ್ಷ ಟಿಡಿಪಿ ಮುಸ್ಲಿಮರಿಗೆ 4% ಮೀಸಲಾತಿ ಕೊಡುವುದಾಗಿ ಘೋಷಿಸಿದೆ. ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಬಿಸಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಬಿಜೆಪಿ ಮುಖಂಡರು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಈ ಬೆಳವಣಿಗೆ ಕೂತುಹಲ ಮೂಡಿಸಿದೆ.
ರಾಜ್ಯದಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವುದಾಗಿ ಮಾಜಿ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. “ಮೊದಲಿನಿಂದಲೂ, ನಾವು 4% ಮೀಸಲಾತಿಯನ್ನು ಬೆಂಬಲಿಸುತ್ತೇವೆ, ಈ ನಿರ್ಧಾರವನ್ನಿ ಇದನ್ನು ಮುಂದುವರಿಸುತ್ತೇವೆ…” ಎಂದು ಮಾಧ್ಯಮ ಪ್ರತಿನಿಧಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದೀಗ ಬಿಜೆಪಿಯ ನಿಲುವು ಮತ್ತು ಟಿಡಿಪಿ ನಿಲುವು ಪರಸ್ಪರ ಭಿನ್ಮವಾಗಿದ್ದು ಬಿಜೆಪಿ ಇದರ ಕುರಿತು ಯಾಚ ರೀತಿ ಪ್ರತಿಕ್ರಿಯಿಸಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
#WATCH | Dharmavaram, Andhra Pradesh: On his promise to preserve 4% reservations to Muslims in the state, Former CM and TDP chief N Chandrababu Naidu says "From the beginning, we are supporting 4% reservation and that will continue this…" pic.twitter.com/9lePHM97WK
— ANI (@ANI) May 5, 2024