ಹಾಸನ ಲೈಂಗಿಕ ಹಗರಣ: ತೀವ್ರಗೊಂಡ ಪ್ರತಿಭಟನೆ; ಪ್ರಜ್ವಲ್ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು | ಎಲ್ಲಿ ಶೋಭ ಕರಂದ್ಲಾಜೆ, ಬಿಜೆಪಿ ಯಾಕೆ ಮಾತನಾಡುತ್ತಿಲ್ಲ ಎಂದ ಆಕ್ರೋಶಿತರು!

ಬೆಂಗಳೂರು: ಪೆನ್’ಡ್ರೈವ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಬಿಜೆಪಿ ಎನ್.ಡಿ.ಎ ಅಭ್ಯರ್ಥಿ ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೇಸ್ ಪ್ರತಿಭಟನೆ ನಡೆಸಿದೆ.

ಮಹಿಳಾ ವಿರೋಧಿ ಬಿಜೆಪಿಗೆ, ವಿಕೃತ ಕಾಮಿ ಪ್ರಜ್ವಲ್ ರೇವಣ್ಣನಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತ ಪ್ರಜ್ವಲ್ ರೇವಣ್ಣ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವ ದೃಶ್ಯ ಕಂಡು ಬಂತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, “ಮಹಿಳೆಯ ಚಿಹ್ನೆ ಇರುವ ಜೆಡಿಎಸ್ ಇವತ್ತು‌ಮಹಿಳೆಯರ‌ ಮೇಲೆ ದೌರ್ಜನ್ಯವೆಸಗಿದೆ. ಎಲ್ಲಿ ಶೋಭಾ ಕರಂದ್ಲಾಜೆ? ಬಿಜೆಪಿಯಲ್ಲಿ‌ಮಹಿಳೆಯರೇ ಇಲ್ವಾ? ಇಷ್ಟೊಂದು ದೊಡ್ಡ ಅನ್ಯಾಯವಾದರೂ ಯಾಕೆ ಮಾತನಾಡುತ್ತಿಲ್ಲ ಎಂದು‌ ಆಕ್ರೋಶ ಹೊರ ಹಾಕಿದ್ದಾರೆ.

ಈಗಾಗಲೇ ಸರಕಾರ ‌ಈ ಪ್ರಕರಣವನ್ನು SIT ಗೆ ನೀಡಿದ್ದು ಮಹಾ ಲೈಂಗಿಕ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರತಿಭಟನೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

https://www.facebook.com/share/v/c6aMfo7MajxpoM3f/?mibextid=9rXMBq

Latest Indian news

Popular Stories