ಕಳೆದ ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ನೋಡಿದ್ದೇವೆ- ನಟ ಪ್ರಕಾಶ್ ರಾಜ್

ಬೆಂಗಳೂರು: ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ನಗರದ ಮತಗಟ್ಟೆಯೊಂದರಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಮತ ನನ್ನ ಹಕ್ಕಿಗಾಗಿ ಇದೆ. ನನ್ನ ಹಕ್ಕಿನಿಂದ ಆಯ್ಕೆಯಾಗುವವರು ಸಂಸತ್ತಿನಲ್ಲಿ ನನ್ನ ಧ್ವನಿಯಾಗುವರು, ನೀವು ನಂಬಿರುವ ಅಭ್ಯರ್ಥಿ ಆಯ್ಕೆ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಕಳೆದ ದಶದಲ್ಲಿ ದ್ವೇಷ ಮತ್ತು ವಿಭಜಕ ರಾಣಕಾರಣ ನೋಡಿರುವುದರಿಂದ ಬದಲಾವಣೆ ತರವಂತಹ ಅಭ್ಯರ್ಥಿಯಲ್ಲಿ ನಂಬಿಕೆ ಇಟ್ಟು ಮತದಾನ ಮಾಡಿರುವುದಾಗಿ ತಿಳಿಸಿದರು.

Latest Indian news

Popular Stories