ಕಾರ್ಕಳ: ನಗರದ ಬಜರಂಗದಳದ ಮುಖಂಡನೊಬ್ಬ ಕಾರ್ಯಕರ್ತನ ಪತ್ನಿಯನ್ನು ಅಪಹರಿಸಿ ಸುದ್ದಿಯಲ್ಲಿದ್ದಾನೆ.
ಈ ಕೃತ್ಯ ಎಸಗಿದವನು ಬಜಗೋಳಿಯ ಬಜರಂಗದಳದ ವಲಯ ಸಂಚಾಲಕ ಸಂದೀಪ್ ಆಚಾರ್ಯ. ಈತನ ಕೃತ್ಯದ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಡಬಿದರೆ ಬಜರಂಗದಳದ ಕಾರ್ಯಕರ್ತ ಹರೀಶ್ ಎಂಬುವವರ ಪತ್ನಿಯನ್ನು ಈತ ಅಪಹರಿಸಿದ್ದನು. ಇದೀಗ ಆಕೆಯನ್ನು ಪತ್ತೆ ಹಚ್ಚಿ ಕೌನ್ಸಿಲಿಂಗ್ ಸೆಂಟರ್’ಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದ ಯುವತಿಯನ್ನು ಸಂದೀಪ್ ಆಚಾರ್ಯ ಅಪಹರಿಸಿದ್ದ ಎಂದು ದೂರು ದಾಖಲಾಗಿತ್ತು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.