ವಿರಾಜಪೇಟೆಯ ಮುಖ್ಯರಸ್ತೆ, ಮಲಬಾರ್ ರಸ್ತೆ, ಹಾಗೂ ಮಹಿಳಾ ಸಮಾಜ ರಸ್ತೆಯ ಅಗಲೀಕರಣಕ್ಕೆ ಇಂದು ಸರ್ವೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪುರಸಭೆ ಮುಖ್ಯ ಅಧಿಕಾರಿಗಳು ಖುದ್ದು ಹಾಜರಿದ್ದು ಅಳತೆ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಇದೇ ಸಂದರ್ಭ ಜಿಲ್ಲಾಧಿಕಾರಿಗಳಾದ ವೆಂಕಟರಾಜ್, ಹಾಗು ತಹಶೀಲ್ದಾರ್ ಅವರು ಕೂಡ ಮಹಿಳಾ ಸಮಾಜ ರಸ್ತೆಯ ಅಗಲೀಕರಣ ಸರ್ವೇ ಸಂದರ್ಭ ಖುದ್ದು ಹಾಜರಿದ್ದು ಪರಿಶೀಲಿಸಿದರು .
ಮುಖ್ಯ ರಸ್ತೆಯ ಮಧ್ಯಭಾಗದಿಂದ 10 ಮೀಟರ್ ಎರಡು ಕಡೆ ಅಳತೆ ಮಾಡಿ ಗುರುತು ಹಾಕಲಾಗಿದೆ. ಕಳೆದ ಹಲವಾರು ವರ್ಷಗಳಿಂದ ರಸ್ತೆ ಅಗಲೀಕರಣಕ್ಕೆ ಹೆಜ್ಜೆ ಹಾಕಿದರೂ ಕೂಡ ಕೆಲವು ಪಟ-ಭದ್ರ ಹಿತಾಸಕ್ತಿಗಳ ಅಡೆತಡೆಯಿಂದ ತೀವ್ರ ಕಿಷ್ಕಿಂದ ಆಗಿರುವ ವಿರಾಜಪೇಟೆ ನಗರದ ರಸ್ತೆಗಳ ಅಗಲೀಕರಣಕ್ಕೆ ಅಡ್ಡಿ ಉಂಟಾಗಿತ್ತು. ಕೆಲವರು ಅಗಲೀಕರಣ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆ ಆಜ್ಞೆಯನ್ನು ಕೂಡ ತಂದಿದ್ದರು, ತಡೆ ಆಜ್ಞೆಯನ್ನು ತೆರವುಗೊಳಿಸಲು ಕೆಲವರು ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಇದುವರೆಗೆ ಸಾಧ್ಯವಾಗದರಿಂದ ರಸ್ತೆ ಅಗಲೀಕರಣ ನೆನೆಗುದ್ದಿಗೆ ಬಿದ್ದಿತ್ತು . ಇದೀಗ ಶಾಸಕರಾದ ಎ.ಎಸ್ ಪೊನ್ನಣ್ಣನವರ ಆಸಕ್ತಿಯಿಂದ ತೀವ್ರ ಕಿಷ್ಣಕಿಂದ ಆಗಿರುವ ವಿರಾಜಪೇಟೆ ರಸ್ತೆಗೆ ಮುಕ್ತಿ ದೊರಕಿಸಲು ಸರ್ವೆ ಕಾರ್ಯ ನಡೆಯುತ್ತಿದೆ.