ದೆಹಲಿ ಗಲಭೆ: ತಾಹಿರ್ ಹುಸೇನ್’ಗೆ ಜಾಮೀನು ಮಂಜೂರು

ದೆಹಲಿ- ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಗಲಭೆಯ ಪ್ರಮುಖ ಆರೋಪಿ ತಾಹಿರ್ ಹುಸೇನ್ ಅವರ ಆರನೇ ಪ್ರಕರಣದಲ್ಲಿ ಇಂದು ಜಾಮೀನು ಪಡೆದಿದ್ದಾರೆ. ಈ ಹಿಂದೆ ಆಮ್ ಆದ್ಮಿ ಪಾರ್ಟಿ (ಎಎಪಿ) ಯೊಂದಿಗೆ ಸಂಬಂಧ ಹೊಂದಿದ್ದ ಹುಸೇನ್ ನಂತರ ಹೊರಹಾಕಲ್ಪಟ್ಟಿದ್ದರು. ದೆಹಲಿಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ ಆರೋಪಗಳನ್ನು ಎದುರಿಸಿದ್ದರು.

ಅಸೋಸಿಯೇಷನ್ ​​ಫಾರ್ ದಿ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಪರವಾಗಿ ನ್ಯಾಯವಾದಿ ತಾರಾ ನರುಲಾ ಅವರು ನ್ಯಾಯಾಲಯದಲ್ಲಿ ಹುಸೇನ್ ಅವರನ್ನು ಪ್ರತಿನಿಧಿಸಿದರು. ಜಾಮೀನು ಸಿಕ್ಕಿದ್ದು ನ್ಯಾಯದತ್ತ ಒಂದು ಹೆಜ್ಜೆ ಎಂದು ನಂಬಲಾಗಿದೆ ಎಂದು APCR ನ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಹೇಳಿದ್ದಾರೆ.

ದೆಹಲಿ ಗಲಭೆಯಲ್ಲಿ ತಾಹಿರ್ ಹುಸೇನ್ ಭಾಗಿಯಾಗಿರುವ ಬಗ್ಗೆ ಭಾರೀ ಚರ್ಚೆ ಮತ್ತು ತನಿಖೆ ನಡೆದಿದೆ. ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವುದು ಮತ್ತು ನಿರ್ದಿಷ್ಟ ಸಮುದಾಯಗಳ ವಿರುದ್ಧ ದಾಳಿಗಳನ್ನು ನಡೆಸುವುದು ಸೇರಿದಂತೆ ವಿವಿಧ ಆರೋಪಗಳನ್ನು ಮಾಡಲಾಗಿದೆ. ಪರಿಣಾಮವಾಗಿ, ಅವರು ಹಲವಾರು ಪ್ರಕರಣಗಳನ್ನು ಎದುರಿಸಬೇಕಾಗಿ ಬಂದಿತ್ತು. ಹಲವಾರು ಬಾರಿ ಬಂಧಿಸಲ್ಪಟ್ಟಿದ್ದರು.

Latest Indian news

Popular Stories