ಉಡುಪಿ, ಡಿ.17: ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ತಾಯಿ ಕೆನರಾ ಬ್ಯಾಂಕಿನ ನಿವೃತ್ತ ಎಜಿಎಂ ಮೀನಾಕ್ಷಿ ವಿ.ಭಂಡಾರಿ(74) ಇಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇವರು ಪುತ್ರ ಡಾ.ಪಿ.ವಿ.ಭಂಡಾರಿ, ಪುತ್ರಿ ವಿಶಾಲಾಕ್ಷಿ, ಸೊಸೆ ನೇತ್ರತಜ್ಞೆ ಡಾ.ಸುಲತಾ ಭಂಡಾರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.