ರಾಯಚೂರು: ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ್ (Kariyamma Nayak) ಅವರಿಗೆ ಅವಾಚ್ಯ ಶಬ್ದದಿಂದ (Abusing vlogger) ನಿಂದಿಸಿದ ಆರೋಪದಡಿ 8 ಜನ ಬಿಜೆಪಿ ಕಾರ್ಯಕರ್ತರ (BJP Activists) ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಅರಕೇರಾ ತಾಲೂಕಿನ ಆಲದಮರ ತಾಂಡಾದಲ್ಲಿ ಜೂ.4ರಂದು ವಿದ್ಯುತ್ ತಂತಿ ತಗುಲಿ ಲೈನ್ಮ್ಯಾನ್ ವಿರೂಪಾಕ್ಷ ಸಾವನ್ನಪ್ಪಿದ್ದರು.
ಘಟನಾ ಸ್ಥಳಕ್ಕೆ ಶಾಸಕಿ ಕರಿಯಮ್ಮ ನಾಯಕ್ ತಡವಾಗಿ ಆಗಮಿಸಿದ್ದರು. ಈ ವೇಳೆ ಶಾಸಕಿ ಕರಿಯಮ್ಮ ನಾಯಕ್ ಅವರಿಗೆ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆಂಬ ಆರೋಪದಡಿ ಎಫ್ಐಆರ್ ದಾಖಲಾಗಿದೆ.