ರಾಯಚೂರು: ಶಾಸಕಿಯನ್ನು ನಿಂದಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ರಾಯಚೂರು: ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ್​ (Kariyamma Nayak) ಅವರಿಗೆ ಅವಾಚ್ಯ ಶಬ್ದದಿಂದ (Abusing vlogger) ನಿಂದಿಸಿದ ಆರೋಪದಡಿ 8 ಜನ ಬಿಜೆಪಿ ಕಾರ್ಯಕರ್ತರ (BJP Activists) ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್​​ಐಆರ್ (FIR)​ ದಾಖಲಾಗಿದೆ.

ಅರಕೇರಾ ತಾಲೂಕಿನ ಆಲದಮರ ತಾಂಡಾದಲ್ಲಿ ಜೂ.4ರಂದು ವಿದ್ಯುತ್ ತಂತಿ ತಗುಲಿ ಲೈನ್​​ಮ್ಯಾನ್ ವಿರೂಪಾಕ್ಷ ಸಾವನ್ನಪ್ಪಿದ್ದರು.

ಘಟನಾ ಸ್ಥಳಕ್ಕೆ ಶಾಸಕಿ ಕರಿಯಮ್ಮ ನಾಯಕ್ ತಡವಾಗಿ ಆಗಮಿಸಿದ್ದರು. ಈ ವೇಳೆ ಶಾಸಕಿ ಕರಿಯಮ್ಮ ನಾಯಕ್​ ಅವರಿಗೆ ಬಿಜೆಪಿ ಕಾರ್ಯಕರ್ತರು ​ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆಂಬ ಆರೋಪದಡಿ ಎಫ್​​ಐಆರ್ ದಾಖಲಾಗಿದೆ.

Latest Indian news

Popular Stories