ರಾಯಚೂರು (ದೇವದುರ್ಗ):- ದುಡಿಮೆ ಅರಸಿ ದೂರದೂರಿನಿಂದ ಬಂದ ಕಾರ್ಮಿಕರ ಮೇಲೆ ಜೆಸಿಬಿ ಹರಿದಪರಿಣಾಮ ಸ್ಥಳದಲ್ಲಿ ಮೂರು ಜನ ದುರ್ಮರಣಗೊಂಡ ಘಟನೆ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಹೊಲವೊಂದರಲ್ಲಿ ಬೋರ್ ವೆಲ್ ಕೊರಿಯಲು ಬಂದಿದ್ದ ಕಾರ್ಮಿಕರು ರಾತ್ರಿ ಪಕ್ಕದ ಹೊಲದಲ್ಲಿ ಕಾಲುದಾರಿಯಲ್ಲಿ ಮಲಗಿದ್ದಾಗ, ರಾತ್ರಿ ವೇಳೆ ಜೆಸಿಬಿಯು ಅವರ ಮೇಲೆ ಹರಿದಿದ್ದರಿಂದಾಗಿ ಸ್ಥಳದಲ್ಲಿಯೇ ಛತ್ತೀಸಗಡ ಮೂಲದ ಬೋರ್ವೆಲ್ ಕಾರ್ಮಿಕರಾದ ವಿಷ್ಣು (26),ಶಿವರಾಮ (28) ಹಾಗೂ ಬಲರಾಮ್ (30) ಮೃತಪಟ್ಟಿದ್ದಾರೆ. ಈ ಕುರಿತಂತೆ ದೇವದುರ್ಗ ಠಾಣೆಯ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ಬಂದವರು ಮಣ್ಣಿನಲ್ಲಿ ಮಣ್ಣಾಗಿದ್ದು ದುರದೃಷ್ಟಕರ ಎನ್ನಲಾಗಿದೆ.