ಬೈಂದೂರು; ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ


ಬೈಂದೂರು:ಸೆ.27;ಕಳೆದ 10 ತಿಂಗಳು ರೈತರು ಬೆಂಬಲ ಬೆಲೆ ಕಾಯ್ದೆಯಲ್ಲಿ ತರಬೇಕು ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಕಾಟಾಚಾರಕ್ಕಾಗಿ ರೈತ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸುತ್ತದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.


ಅವರು ಬೈಂದೂರಿನ ಅಂಡರ್ ಪಾಸ್ ನಲ್ಲಿ ರೈತರ ಮೂರು ಕ್ರಷಿಕಾಯ್ದೆಗಳು,ಬೆಲೆ ಏರಿಕೆ, ಕಾರ್ಮಿಕರ ಸಂಹಿತೆಗಳನ್ನು ವಿರೋಧಿಸಿ ನಡೆದ ಭಾರತ್ ಬಂದ್ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದ ನಂತರ ಅತೀ ದೀರ್ಘ ಹಾಗೂ ಶಾಂತಿಯುತವಾಗಿ ನಡೆಯುತ್ತಿರುವ ರೈತರ ಹೋರಾಟ ಐತಿಹಾಸಿಕ ಹೋರಾಟವಾಗಿ ದಾಖಲಾಗಿದೆ.ಕೇಂದ್ರ ಸರಕಾರ ಹೋರಾಟವನ್ನು ದಾರಿತಪ್ಪಿಸಲು ಪ್ರಯತ್ನಿಸಿ ಹತ್ತಿಕ್ಕಲು,ಅಪಪ್ರಚಾರಗಳನ್ನೂ ಹಲವಾರು ಹಲವು ಬಾರಿ ನಡೆಸಿಯೂ ವಿಫಲವಾಗಿದೆ.ಅನ್ನದಾತರು ನಡೆಸುತ್ತಿರುವ ಹೋರಾಟ ರೈತರ ಬಗ್ಗೆ ಮಾತ್ರವಲ್ಲ ಅವರ ಹೋರಾಟ ದೇಶದ ಪ್ರತಿಯೊಬ್ಬ ಪ್ರಜೆಯ ಆಹಾರ ಹಕ್ಕಿನ ಭದ್ರತೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ.ಮೂರು ಕ್ರಷಿ ಕಾಯ್ದೆಗಳ ತಿದ್ದುಮಾಡಿ ಅದರ ಪೂರಕವಾದ ಭೂಮಸೂದೆ ತಿದ್ದುಪಡಿ,ವಿದ್ಯುತ್ ಕಾಯ್ದೆ ತಿದ್ದುಪಡಿ ದೇಶದ ಜನರನ್ನು ಲೂಟಿ ಮಾಡಲು ಬಂಡವಾಳಗಾರರಿಗೆ ಸೂಪರ್ ಲಾಭ ತಂದುಕೊಟ್ಟು ಬಿಜೆಪಿ ಪಕ್ಷವನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಮಾಡುವ ತಂತ್ರವಾಗಿದೆ ಎಂದು ಅವರು ದೂರಿದರು.


ಕ್ರಷಿಕೂಲಿಕಾರರ ಸಂಘಟನೆ ಜಿಲ್ಲಾಧ್ಯಕ್ಷ ವೆಂಕಟೇಶ ಕೋಣಿ ಪ್ರಾಸ್ತಾವಿಕವಿಗಿ ಮಾತನಾಡಿದರು.
ಕಾಂಗ್ರೇಸ್ ಪಕ್ಷದ ಮುಖಂಡರಾದ ಮದನ್ ಕುಮಾರ್,ಪ್ರಕಾಶ್ಚಂದ್ರ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.ಡಿಎಸ್ಎಸ್ ಮುಖಂಡರಾದ ದಯಾನಂದ,ಜೆಡಿಎಸ್ ಪಕ್ಷದ ಸಂದೇಶ್ ಭಟ್,ಪಡುಕೋಣೆ ವ್ಯವಸಹಾಯ ಸಂಘದ ಅಧ್ಯಕ್ಷರು,ಕಾರ್ಮಿಕ ಮುಖಂಡರಾದ ರಾಜೀವ ಪಡುಕೋಣೆ,ಕ್ರಷಿಕೂಲಿಕಾರ ಸಂಘದ ನಾಗರತ್ನ ನಾಡ,ಡಿವೈಎಫ್ಐ ಮುಖಂಡ ವಿಜಯ್, ಜನವಾದಿ ಮಹಿಳ ಸಂಘಟನೆಯ ಶೀಲಾವತಿ,ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ,ಸಿಐಟಿಯು ತಾಲೂಕು ಸಂಚಾಲಕರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮೊದಲಾದವರಿದ್ದರು.

Latest Indian news

Popular Stories