ಕಾರವಾರ : ವೃಕ್ಷಮಾತೆ, ಸಸಿಗಳ ತಾಯಿ ಎಂದೇ ಹೆಸರಾದ ತುಳಸಿ ಗೌಡ ಹೊನ್ನಳ್ಳಿ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕಾರವಾರದ ಕ್ರಿಮ್ಸ ಅಧೀನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅವರನ್ನು ಐಸಿಯು ನಲ್ಲಿಡಲಾಗಿದ್ದು, ಪ್ರಾಣಾಪಾಯ ಏನೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಪದ್ಮಶ್ರೀ ತುಳಸಿ ಗೌಡ ಅವರು ಕಾಲು ಜಾರಿ ಬಿದ್ದಿದ್ದು , ದುಗುಡು ಗೊಂಡಿದ್ದಾರೆ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದವರಾದ ತುಳಸಿ ಗೌಎ ಮನೆಯಲ್ಲಿಯೇ ಜಾರಿ ಬಿದ್ದಿದ್ದರಿಂದ ಕಾಲಿಗೆ ಪೆಟ್ಟಾಗಿತ್ತು. ಫ್ಯಾಕ್ಚರ್ ಆಗಿದೆಯೋ ಎಂಬ ಬಗ್ಗೆ ನಾಳೆ ಖಚಿತವಾಗಲಿದೆ. ಈಗ ಅವರಿಗೆ ಪ್ರಾಥಮಿಕ ಚಿಕಿತ್ಸೆ ಮಾತ್ರ ನೀಡಲಾಗಿದೆ ಎಂದು ಕ್ರಿಮ್ಸ ವೈದ್ಯರು ತಿಳಿಸಿದ್ದಾರೆ.
ಲಕ್ಷಾಂತರ ಸಸಿಗಳನ್ನು ಬೆಳೆಸಿ, ಅರಣ್ಯ ಇಲಾಖೆಯ ಪ್ರಶಂಸೆಗೆ ಅವರು ಪಾತ್ರರಾಗಿದ್ದರು. ಬೀಜಗಳನ್ನು ಕಾಪಾಡಿ ಸಸಿ ಬೆಳೆಸುವುದರಲ್ಲಿ ಅವರು ಪ್ರವೀಣೆ. ವೃಕ್ಷಮಾತೆ ಎನಿಸಿಕೊಂಡಿರುವ ತುಳಸಿ ಗೌಡ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.
…..